ಕೆನಡಾ ಪಾರ್ಲಿಮೆಂಟ್ ನಲ್ಲಿ ಚಂದ್ರ ಆರ್ಯರಿಂದ ಮೊಳಗಿತು ಕನ್ನಡದ ಕಂಪು

ಕನ್ನಡದವರಾಗಿದ್ದು, ಕರ್ನಾಟಕ ಬಿಟ್ಟು ಹೊರ ರಾಜ್ಯಕ್ಕೆ ಹೋದರೇ ಕನ್ನಡ ಮಾತನಾಡುವುದು ಕಷ್ಟ. ಆದರೆ ನಮ್ಮ ದೇಶ ಬಿಟ್ಟು ದೂರದ ದೇಶಕ್ಕೆ ಹೋದರೂ ಅವರು ಕನ್ನಡವನ್ನು ಮರೆತಿಲ್ಲ. ಹಾಗಂತ ಅವರು ಸಾಮಾನ್ಯ ವ್ಯಕ್ತಿಯಲ್ಲ ಕೆನಡಾ ಸಂಸತ್ತಿಗೆ ಸಂಸದರಾಗಿ ಆಯ್ಕೆಯಾಗಿರುವವರು. ಇಂದು ಎಲ್ಲೆಲ್ಲೂ ಚಂದ್ರ ಆರ್ಯ ಅವರದ್ದೇ ಮಾತು, ಚಂದ್ರ ಆರ್ಯ ಅವರದ್ದೆ ವಿಡಿಯೋ.

https://fb.watch/d6Y_fQhM7u/

ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ಶಿರಾದ ಬಳಿಯವರು. ಕೆನಡಾದಲ್ಲಿ ವಾಸವಿರುವ ಚಂದ್ರ ಆರ್ಯ ಅವರು, ಸಂಸತ್ತಿಗೆ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವಾಗ, ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಿ, ಕನ್ನಡಿಗರಿಗೆ ರೋಮಾಂಚನಕಾರಿಯಾಗುವಂತೆ ಮಾಡಿದ್ದಾರೆ. ಕೆನಡಾ ಸಂಸತ್ತಿನಲ್ಲಿ ಕನ್ನಡ ಮೊಳಗಿದ್ದು, ಕನ್ನಡಿಗರ ಎದೆಯಲ್ಲಿ ಖುಷಿಯ ಜೊತೆ ಜೊತೆಗೆ ಆತ್ಮಗೌರವವೂ ಹೆಚ್ಚಿದೆ.

ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರುರು ಗ್ರಾಮದ ವ್ಯಕ್ತಿಯೊಬ್ಬ ಎಂಬುದರಿಂದ ಶುರು ಮಾಡಿ ಎಲ್ಲಾದರೂ ಇರು ಎಂತಾದರೂ ಇರು ಎಂದೆದಿಗೂ ಕನ್ನಡವಾಗಿರು ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಲ್ಲೂ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *