Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಣಕ್ಯ ನೀತಿ : ಅಪ್ಪಿತಪ್ಪಿಯೂ ಇಂತಹ ಜಾಗಗಳಲ್ಲಿ ಮರೆತೂ ಮನೆ ಕಟ್ಟಬೇಡಿ!

---Advertisement---

ಆಚಾರ್ಯ ಚಾಣಕ್ಯರ ನೀತಿ ಮತ್ತು ಬೋಧನೆಗಳು ಇಂದಿನ ಯುವ ಪೀಳಿಗೆಗೂ ಅತ್ಯಂತ ಪ್ರಸ್ತುತವಾಗಿವೆ. ಅವರ ಅದ್ಭುತ ಜ್ಞಾನ ಮತ್ತು ಜೀವನ ಸೂತ್ರಗಳನ್ನು ತಿಳಿದುಕೊಳ್ಳಲು ಇಂದಿಗೂ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆಸಕ್ತಿ ತೋರಿಸುತ್ತಾರೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವ ಜೀವನದ ಯಶಸ್ಸು ಮತ್ತು ಸುಖ-ಶಾಂತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ.

ಅದರಂತೆ, ಚಾಣಕ್ಯ ನೀತಿಯ ಪ್ರಕಾರ ನಾವು ವಾಸಿಸುವ ಮನೆ ಎಲ್ಲಿದೆ ಎಂಬುದು ನಮ್ಮ ಪ್ರಗತಿಯನ್ನು ನಿರ್ಧರಿಸುತ್ತದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮನೆ ನಿರ್ಮಿಸಿದರೆ, ಇರುವುದೂ ಕೂಡ ಕೈಬಿಟ್ಟು ಹೋಗುತ್ತದೆ ಮತ್ತು ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಯಾವ ಸ್ಥಳಗಳಲ್ಲಿ ಮನೆ ಕಟ್ಟಬಾರದು ಎಂಬುದರ ವಿವರ ಇಲ್ಲಿದೆ:

ವಿವಾದಾತ್ಮಕ ಸ್ಥಳಗಳು: ಚಾಣಕ್ಯ ನೀತಿಯ ಪ್ರಕಾರ, ಸದಾ ಜಗಳ, ಗಲಾಟೆ ಅಥವಾ ಕಾನೂನು ವಿವಾದಗಳು ನಡೆಯುವಂತಹ ಪ್ರದೇಶಗಳಲ್ಲಿ ಎಂದಿಗೂ ಮನೆ ಕಟ್ಟಬಾರದು. ಇಂತಹ ಕಡೆಗಳಲ್ಲಿ ವಾಸಿಸುವುದರಿಂದ ಮನೆಯವರ ಮನಃಶಾಂತಿ ಸಂಪೂರ್ಣವಾಗಿ ಹಾಳಾಗುತ್ತದೆ.

ನೀರಿನ ಅಭಾವವಿರುವ ಪ್ರದೇಶ: ನೀರು ಜೀವದ ಆಧಾರ. ಭವಿಷ್ಯದಲ್ಲಿ ನೀರಿನ ತೀವ್ರ ಕೊರತೆ ಎದುರಾಗುವ ಅಥವಾ ಸದ್ಯಕ್ಕೆ ನೀರಿನ ಸೌಲಭ್ಯವಿಲ್ಲದ ಒಣ ಪ್ರದೇಶಗಳಲ್ಲಿ ಮನೆ ನಿರ್ಮಿಸಬಾರದು. ಇದು ಭವಿಷ್ಯದಲ್ಲಿ ಕುಟುಂಬದವರನ್ನು ಆರ್ಥಿಕ ಹಾಗೂ ದೈಹಿಕವಾಗಿ ಹಲವು ಸಮಸ್ಯೆಗಳಿಗೆ ದೂಡುತ್ತದೆ.

ಕಳ್ಳತನದ ಭೀತಿ ಇರುವ ಜಾಗ: ಕಳ್ಳತನ, ಸುಲಿಗೆ ಅಥವಾ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುವ ಸ್ಥಳಗಳಲ್ಲಿ ಮನೆ ನಿರ್ಮಿಸಬಾರದು ಮತ್ತು ಅಂತಹ ಕಡೆಗಳಲ್ಲಿ ಆಸ್ತಿಯನ್ನು ಖರೀದಿಸಬಾರದು. ಇದು ಕುಟುಂಬದ ಸುರಕ್ಷತೆಗೆ ದೊಡ್ಡ ಕಂಟಕವಾಗಬಹುದು.

ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಇಂಟರ್ನೆಟ್‌ ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಅಥವಾ ಇದು ಸಂಪೂರ್ಣ ವೈಜ್ಞಾನಿಕವಾಗಿ ಧೃಡಪಟ್ಟಿದೆ ಎಂದು ಭಾವಿಸಬೇಕಾಗಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now