ಚಳ್ಳಕೆರೆ | ಮೇವಿನ ಬಣಿವೆಗೆ ಬೆಂಕಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

 

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 17 : ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ಮೇವಿನ ಬಣಿವೆಗೆ ಬೆಂಕಿಬಿದ್ದು ಸಂಪೂರ್ಣ ಭಸ್ಮ ವಾಗಿದೆ.

ಕೆಂಚವೀರನಹಳ್ಳಿ ಗ್ರಾಮದ ಮಲ್ಲಯ್ಯ ಎನ್ನುವ ರೈತನಿಗೆ ಸೇರಿದ ಮೇವಿನ ಬಣವೆ ‌ಬೆಂಕಿ ಬಿದ್ದಿದೆ. ಮನೆ ಪಕ್ಕದಲ್ಲಿದ್ದ ಬಣವೆ ಹಾಕಿಕೊಡಿದ್ದರಿಂದ ಬೆಂಕಿ ಜ್ವಾಲೆಗೆ ಕಿಟಕಿ‌ ಮತ್ತು ಬಾಗಿಲುಗಳಿಗೂ ಬೆಂಕಿ ಆವರಿಸಿದೆ. ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿ ಯಾಗಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬಣಿವೆ ಸುಟ್ಟು ನಾಶವಾದ ಕಾರಣ ಕುರಿ-ಮೇಕೆಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇದರಿಂದಾಗಿ ರೈತ ಮಲ್ಲಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ಕಿಡಿಗೇಡಿಗಳ ಕೈವಾಡ ಇರಬಹುದು ಎಂಬ ಶಂಕೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಗ್ರಾಮಸ್ಥರು ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Share This Article
Enable Notifications OK No thanks