Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜನರ ಆಸೆಯಂತೆ ನರಕ ಸೇರಿದ ಚೈತ್ರಾ : ಬಿಗ್ ಬಾಸ್ ನಲ್ಲಿ ಜೈಲಿನ ವಿಚಾರಕ್ಕೆ ಖುಷಿ..!

Facebook
Twitter
Telegram
WhatsApp

ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಈ ಹಿಂದೆಯೇ ಊಹೆ ಮಾಡಿದ್ದಂತ ಕಂಟೆಸ್ಟೆಂಟ್ ಗಳೇ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಅದರಲ್ಲೂ ಚೈತ್ರಾ ಎಂಟ್ರಿಯಾಗುವುದಕ್ಕೂ ಮುನ್ನ ಜನರಿಂದ ಸಾಕಷ್ಟು ಕಮೆಂಟ್ ಗಳು ಬಂದಿದ್ದವು. ಭಾನುವಾರ ಅಧಿಕೃತವಾಗಿ ಓಪನ್ ಆದ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಎಂಬುದರ ಲೆಕ್ಕಚಾರದಲ್ಲಿ ಗೌತಮಿ, ಲಾಯರ್ ಜಗದೀಶ್, ಚೈತ್ರಾ, ಗೋಕ್ಡ್ ಸುರೇಶ್ ಹೆಸರು ರಾಜಾರಾಣಿಯಲ್ಲಿಯೇ ರಿವೀಲ್ ಆಗಿತ್ತು.

ಜೊತೆಗೆ ಬಿಗ್ ಬಾಸ್ ವೀಕ್ಷಕರಿಗೆ ಅವಕಾಶ ನೀಡಿತ್ತು. ಚೈತ್ರಾ ಬಗ್ಗೆ ವೋಟ್ ಮಾಡಲು ತಿಳಿಸಿತ್ತು. ಅದರಂತೆ ಲಕ್ಷಾಂತರ ಜನ ವೋಟ್ ಕೂಡ ಮಾಡಿದ್ದಾರೆ. ಅದರ ಜೊತೆಗೆ ಕಮೆಂಟ್ ಕೂಡ ಮಾಡಿದ್ದರು. ಚೈತ್ರಾ ಅವರನ್ನು ಮೊದಲು ನರಕಕ್ಕೆ ಕಳುಹಿಸಿ ಎಂದು ಸಲಹೆ ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ನರಕದ ಕಮೆಂಟ್ ಬಂದಿರುವುದಕ್ಕೆ ಬಿಗ್ ಬಾಸ್ ಕೂಡ ಚೈತ್ರಾ ಅವರನ್ನು ನರಕಕ್ಕೆ ಕಳುಹಿಸಿದೆ.

ಚೈತ್ರಾ ಖ್ಯಾತ ವಾಗ್ಮಿ ಎನಿಸಿಕೊಂಡಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂಪಾಯಿ ಹಣ ಮೋಸ ಮಾಡಿದ್ದ ಆರೋಪದ ಮೇಲೆ ಜೈಲು ಸೇರಿದ್ದರು. ಜೈಲಿನಲ್ಲಿದ್ದಾಗಲೇ ಬಿಗ್ ಬಾಸ್ ಅನ್ನು ನೋಡಿದ್ದರಂತೆ. ಮೊದಲೇ ಎಂಟ್ರಿ ಕೊಟ್ಟಿದ್ದ ಲಾಯರ್ ಜಗದೀಶ್ ಕೂಡ ಬಿಗ್ ಬಾಸ್ ಅನ್ನ ಜೈಲಿನಲ್ಲಿಯೇ ನೋಡಿದ್ದರಂತೆ. ಇಬ್ಬರು ಬಿಗ್ ಬಾಸ್ ವೇದಿಕೆ ಮೇಲೆ ನಿಂತು ಜೈಲಿನ ದಿನಗಳನ್ನು ನೆನೆದು ಎಂಜಾಯ್ ಮಾಡಿದ್ದಾರೆ. ಜೂನಿಯರ್ – ಸೀನಿಯರ್ ಎಂಬೆಲ್ಲಾ ಮಾತುಕತೆಗಳು ಜೋರಾಗಿದ್ದವು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Acidity : ಅಸಿಡಿಟಿಯಿಂದ ಬಳಲುತ್ತಿದ್ದೀರಾ ? ಇದನ್ನು ದಿನಕ್ಕೆ ಎರಡು ಬಾರಿ ಮಾಡಿ..!

  ಸುದ್ದಿಒನ್ : ಕೆಲವರು ಸ್ವಲ್ಪ ತಿಂದ ನಂತರ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಾರೆ. ಇದು ದೇಹದ ಅಸ್ವಸ್ಥತೆ ಮತ್ತು ಎದೆಯುರಿ ಉಂಟುಮಾಡುತ್ತದೆ. ಈ ಹಠಾತ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಕೆಳಗಿನ ಮನೆಮದ್ದುಗಳನ್ನು ಪ್ರಯತ್ನಿಸಿ

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ, ಶನಿವಾರ- ರಾಶಿ ಭವಿಷ್ಯ ಅಕ್ಟೋಬರ್-5,2024 ಸೂರ್ಯೋದಯ: 06:10, ಸೂರ್ಯಾಸ್ತ : 05:58 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

error: Content is protected !!