ಚೈತ್ರಾ ಕುಂದಾಪುರ ವಂಚನೆ ಪ್ರಕರಣ : ಹಾಲಶ್ರೀ ಸ್ವಾಮೀಜಿ ಬಂಧನ..!

 

 

ಚೈತ್ರಾ ಕುಂದಾಪುರ ಐದು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನವಾಗಿದೆ. ಒಡಿಶಾದ ಕಟಕ್ ನಲ್ಲಿ ಬಂಧನವಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ಸ್ವಾಮೀಜಿಯನ್ನು ಬಂಧನ ಮಾಡಲಾಗಿದೆ.

ಚೈತ್ರಾ ಬಂಧನದ ಬಳಿಮ ಹಾಲಶ್ರೀ ತಲೆ‌ಮರೆಸಿಕೊಂಡಿದ್ದರು. ಅಂದಿನಿಂದ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದರು. ಆದರೂ ಸಿಕ್ಕಿರಲಿಲ್ಲ. ಬಳಿಕ ಕರ್ನಾಟಕ ಪೊಲೀಸರು ಒಡಿಶಾ ಪೊಲೀಸರ ಸಹಾಯ ಪಡೆದು, ಖಚಿತ ಮಾಹಿತಿ ಮೇರೆಗೆ , ಚಲಿಸುವ ರೈಲಿನಲ್ಲಿಯೇ ಬಂಧನ ಮಾಡಲಾಗಿದೆ. ಹಾಲಶ್ರೀ, ಭುವನೇಶ್ವರಕ್ಕೆ ಹೋಗುತ್ತಾ ಇದ್ದರು ಎಂಬ ಮಾಹಿತಿ ಇದೆ. ಇಂದು ಮಧ್ಯರಾತ್ರಿ ಬೆಂಗಳೂರಿಗೆ ಕರೆ ತರಲಿದ್ದಾರೆ ಪೊಲೀಸರು.

ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಆಗಿರುವ ಕಾರಣ ಇನ್ನು ಅದೆಷ್ಟು ಬಚ್ಚಿಟ್ಟ ವಿಚಾರಗಳು ಹೊರ ಬರುತ್ತವೋ ಎಂಬ ಕುತೂಹಲವಿದೆ. ಯಾಕಂದರೆ ಚೈತ್ರಾ ಕುಂದಾಪುರ ಅರೆಸ್ಟ್ ಆದಾಗ ಹಾಲಶ್ರೀ ಸ್ಚಾಮೀಜಿ ಬಂಧನವಾಗಲಿ, ದೊಡ್ಡ ದೊಡ್ಡವರ ಹೆಸರು ಹೊರಗೆ ಬರಲಿದೆ ಎಂದೇ ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *