ಕೆನರಾ ಬ್ಯಾಂಕ್ ವತಿಯಿಂದ ವಾಹನ ಮೇಳ :  ಸ್ಥಳದಲ್ಲೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.09): ತುರುವನೂರು ರಸ್ತೆ ಬ್ಯಾಂಕ್ ಕಾಲೋನಿಯಲ್ಲಿರುವ ಮೆದೇಹಳ್ಳಿ ಶಾಖೆಯ ಕೆನರಾ ಬ್ಯಾಂಕ್‍ನಲ್ಲಿ ಶನಿವಾರ ವಾಹನ ಮೇಳವನ್ನು ಏರ್ಪಡಿಸಲಾಗಿತ್ತು. ಸ್ಥಳದಲ್ಲೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಹಾಗೂ ಸಾಲದ ಸೇವಾ ಶುಲ್ಕ ವಿನಾಯಿತಿಯನ್ನು ಗ್ರಾಹಕರಿಗೆ ನೀಡಲಾಯಿತು.

ಪ್ರತಿಷ್ಠಿತ ವಾಹನ ಬ್ರ್ಯಾಂಡ್‍ಗಳಾದ ಹುಂಡೈ, ಮಾರುತಿ ಸುಜುಕಿ, ಟಾಟಾ, ಟೊಯೋಟ, ರೆನಾಲ್ಟ್, ಮಹೀಂದ್ರ, ಕಿಯಾ ಹಾಗೂ ರಾಯಲ್ ಎನ್ಫೀಲ್ಡ್‍ಗಳು ಮೇಳದಲ್ಲಿ ಭಾಗವಹಿಸಿದ್ದವು.

ಆರ್.ಎ.ಹೆಚ್.ವಿಭಾಗೀಯ ಪ್ರಬಂಧಕ ಡಿ.ಆರ್.ಮಲ್ಲಿಕಾರ್ಜುನ್, ಮುಖ್ಯ ಪ್ರಬಂಧಕರುಗಳಾದ ಟಿ.ಕೆ.ಸಾಯಿಕುಮಾರ್, ನರೇಶ್‍ಕುಮಾರ್, ಹೊಳಲ್ಕೆರೆ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕರಾದ ರೇಣುಶರ್ಮ, ಹಿರಿಯ ಪ್ರಬಂಧಕ ಬಿ.ಆರ್.ಕುಮಾರ್, ಮತ್ತು ತುುರವನೂರು ರಸ್ತೆಯಲ್ಲಿರುವ ಶಾಖೆಯ(ಮೆದೇಹಳ್ಳಿ ಶಾಖೆ) ವ್ಯವಸ್ಥಾಪಕ ಕೃಷ್ಣಪ್ಪ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *