ಎರಡು ಕ್ಷೇತ್ರದ ಬೈ ಎಲೆಕ್ಷನ್, ಹೈಕಮಾಂಡ್ ನಿಂದ ಟಿಕೆಟ್ ಫೈನಲ್

suddionenews
1 Min Read

ಬೆಂಗಳೂರು: ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆ ಪಕ್ಷದ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.ಈ ವೇಳೆ ನಗರದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಮುಖಂಡರ ಜೊತೆ ನಿನ್ನೆ ಸಭೆ ನಡೆಸಿದ್ದೇವೆ. ಶ್ರೀನಿವಾಸ್ ಮಾನೆ, ಮನೋಹರ ತಹಶೀಲ್ದಾರ್ ಇಬ್ಬರ ಜೊತೆಯೂ ಮಾತುಕತೆ ನಡೆಸಲಾಗಿದೆ.

ಇನ್ನೂ ನಾವು ಯಾರಿಗೆ ಟಿಕೆಟ್ ಅಂತಾ ಘೋಷಣೆ ಮಾಡಿಲ್ಲ, ಪಕ್ಷದ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಲಿದೆ ಯಾರಿಗೆ ಟಿಕೆಟ್ ಸಿಕ್ಕರು ಎಲ್ಲರು ಒಂದಾಗಿ ಹೋಗಬೇಕು.
ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಕ್ಕರೆ ಮನೋಹರ ತಹಶೀಲ್ದಾರ್ ಕೆಲಸ ಮಾಡಬೇಕು, ತಹಶೀಲ್ದಾರ್ ಗೆ ಟಿಕೆಟ್ ಸಿಕ್ಕರೆ ಶ್ರೀನಿವಾಸ್ ಮಾನೆ ಬೆಂಬಲಿಸಬೇಕು ಈ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ.

ಇನ್ನೂ ಸಿಂದಗಿ ವಿಧಾನಸಭಾ ಕ್ಷೇತ್ರದಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರಕ್ಕೆ
ಇವತ್ತು ಕೆಪಿಸಿಸಿಯಲ್ಲಿ ಸಭೆ ಇದೆ‌. ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡುತ್ತೇವೆ. ಸುಣಗಾರ ಸೀನಿಯರ್ ‌ಲೀಡರ್, ಹನ್ನೆರಡು ವರ್ಷ ಜಿಲ್ಲಾಧ್ಯಕ್ಷರಾಗಿ ಕೆಲಸ‌ ಮಾಡಿದ್ದಾರೆ. ಅವರು ಕೂಡ ಟಿಕೆಟ್ ಆಕಾಂಕ್ಷಿ, ಅವರ ಜೊತೆ ನಾನು ಮಾತನಾಡಿದ್ದೇನೆ. ಹಾಗಾಗಿ ಇವತ್ತಿನ ಮೀಟಿಂಗ್ ನಲ್ಲಿ‌ ನಿರ್ಧಾರವಾಗುತ್ತೆದೆ ಎಂದರು.

ಇನ್ನೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರ್ ಎಸ್ ಎಸ್ ಸೇರುವಂತೆ ಸಚಿವ ಸೋಮಶೇಖರ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸೋಮಶೇಖರ್ ಆರ್ ಎಸ್ ಎಸ್ ನಿಂದ ಬಂದವನಾ.? ಅದಕ್ಕೆ ಹಂಗೆ ಹೇಳಿದ್ದಾರೆ ಎಂದರು

Share This Article
Leave a Comment

Leave a Reply

Your email address will not be published. Required fields are marked *