ಜೂನ್ 11ರಿಂದ ಬಸ್ ಪ್ರಯಾಣ ಫ್ರೀ : ರೂಲ್ಸ್ ಏನು ಗೊತ್ತಾ..?

suddionenews
1 Min Read

 

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ಗ್ಯಾರಂಟಿಗಳು ಯಾವಾಗಿಂದ ಜನರಿಗೆ ಸಿಗಲಿವೆ ಎಂಬುದನ್ನು ತಿಳಿಸಿದ್ದಾರೆ. ಅದರಲ್ಲಿ ನಾಲ್ಕನೇ ಗ್ಯಾರಂಟಿಯಾದ ಶಕ್ತಿ ಯೋಜನೆ ಬಗ್ಗೆ ಡಿಟೈಲ್ ನೀಡಿದ್ದಾರೆ.

ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಬಸ್ ಫ್ರೀ ಮಾಡಲಾಗಿದೆ. ಯಾವೆಲ್ಲಾ ಬಸ್ ಗಳಲ್ಲಿ ಸಂಚಾರಕ್ಕೆ ನಿಷಿದ್ಧ, ಎಲ್ಲಿಯವರೆಗೂ ಸಂಚಾರ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.

ಎಸಿ ಬಸ್, ರಾಜಹಂಸದಲ್ಲೂ ಫ್ರೀ ಆದರೆ ರಾಜ್ಯದ ಒಳಗಡೆ ಮಾತ್ರ ಮತ್ತು ಕರ್ನಾಟಕದವರಿಗೆ ಮಾತ್ರ. ಎಸಿ ಅಂಡ್ ನಾನ್ ಸ್ಲೀಪರ್ ಬಸ್ ಉಚಿತವಿಲ್ಲ. ರಾಜ್ಯದ ಮೂಲೆಯಲ್ಲಿ ಎಲ್ಲಿ ಬೇಕಾದರೂ ಸಂಚಾರ ಮಾಡಬಹುದು. ಆದರೆ ಗಡಿದಾಟಿದವರಿಗೆ ಉಚಿತ ಭಾಗ್ಯವಿರುವುದಿಲ್ಲ. ಈ ತಿಂಗಳ 11 ರಿಂದ ಫ್ರೀ ಬಸ್ ಪ್ರಯಾಣ ಮಾಡಬಹುದು.

ಎಸಿ ಮತ್ತು ಲಕ್ಸುರಿ ಬಸ್ ಹೊರತು ಪಡಿಸಿ ಮಾಡಿದರೆ 90% ಕವರ್ ಆಗುತ್ತೆ. ಆಫೀಸಿಂದ ಮನೆಗೆ ಮನೆಯಿಂದ ಆಫೀಸಿಗೆ ಹೋಗಬಹುದು. 50% ರಿಸರ್ವ್ ಮಾಡ್ತೇವೆ. ಒಂದು ವೇಳೆ ಹೆಣ್ಣು ಮಕ್ಕಳು ಬರದೆ ಹೋದಲ್ಲಿ ಗಂಡು ಮಕ್ಕಳಿಗೆ ಕೊಡ್ತೇವೆ. ಎಲ್ಲಾ ಬಸ್ ನಲ್ಲೂ 50-50 ಕೊಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *