ಕಲಬುರಗಿಯಲ್ಲಿನ ಬಸ್ ದುರಂತಕ್ಕೆ 8 ಜನ ಸಜೀವ ದಹನ ಶಂಕೆ..!

suddionenews
1 Min Read

ಕಲಬುರಗಿ: ಹೈದ್ರಾಬಾದ್ ಗೆ ಹೋಗುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಬಸ್ ನಲ್ಲಿದ್ದ ಏಳು ಎಂಟು ಜನ ಸಜೀವ ದಹನವಾಗಿರುವ ಘಟನೆ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ಸದ್ಯ ಬಸ್ ನ ಬೆಂಕಿ ಶಮನ ಮಾಡಿದ್ದು, ಸತ್ತವರ ಒಟ್ಟು ಸಂಖ್ಯೆಯ ಲೆಕ್ಕ ಇನ್ನು ಸಿಕ್ಕಿಲ್ಲ.

ದುರಂತಕ್ಕೀಡಾದ ಬಸ್ ನಲ್ಲಿ 35 ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಗೋವಾದಿಂದ ಹೈದ್ರಾಬಾದ್ ಕಡೆ ಪ್ರಯಾಣ ಮಾಡಲಾಗುತ್ತಿತ್ತಂತೆ. ಸದ್ಯ ಗಾಯಗೊಂಡ ಹನ್ನೆರಡು ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಎಸ್ಪಿ ಇಶಾ ಪಂಥ್ ಮಾಹಿತಿ ನೀಡಿದ್ದು, ಬೆಳಗ್ಗೆ 6.30ಕ್ಕೆ ಬಸ್ ದುರಂತ ನಡೆದಿದೆ. 6.50ರ ಸುಮಾರಿಗೆ ನಮಗೆ ಮಾಹಿತಿ ಬಂದಿದೆ. ಬಸ್ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ದುರಂತದಲ್ಲಿ 7-8 ಜನ ಸಿಲುಕಿರುವ ಶಂಕೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *