ಮಠದ ಅನುದಾನಕ್ಕೂ ಕಮಿಷನ್ : ದಿಂಗಾಲೇಶ್ಚರ ಸ್ವಾಮೀಜಿ ಆರೋಪಕ್ಕೆ ಬಿಎಸ್ವೈ ಹೇಳಿದ್ದು ಹೀಗೆ..!

suddionenews
1 Min Read

 

ದಾವಣಗೆರೆ: ಮಠಗಳಿಗೆ ಅನುದಾನ ನೀಡಬೇಕಾದರೂ ಕಮಿಷನ್ ಕೊಡಬೇಕು ಎಂಬ ವಿಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಆಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಾರಿಗೆ ಎಷ್ಟು ಕೊಟ್ಟಿದ್ದೀರಿ ಎಂಬ ದಾಖಲೆಗಳನ್ನು ಮೊದಲು ಕೊಡಿ, ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಕೇಳಿದ್ದಾರೆ. ಒಬ್ಬ ಮಠಾಧಿಪತಿಯಾಗಿ ಬೇಜಾವಬ್ದಾರಿಯಿಂದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂತದ್ದಲ್ಲ. ನಿಜಕ್ಕೂ ಅದು ಸತ್ಯವೇ ಆಗಿದ್ದರೆ, ದುವಿಟ್ಟು ವಾಸ್ತವದ ಸ್ಥಿತಿಯನ್ನು ಹೇಳಿ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಸಿಎಂ ಹೇಳಿದ್ದಾರೆ.

ಇನ್ನು ಈಶ್ವರಪ್ಪ ಅವರ ಬಗ್ಗೆ ಮಾತನಾಡಿ, ಈಶ್ವರಪ್ಪ ಅವರು ಯಾವುದೇ ಅಪರಾಧ ಮಾಡದೇಯೆ ಬೇರೆ ಕಾರಣಕ್ಕಾಗಿ ರಾಜೀನಾಮೆ ಕೊಡುವಂತ ಅನಿವಾರ್ಯತೆ ಬಂತು. ನನಗೆ ವಿಶ್ವಾಸವಿದೆ. ಅವರು ಆರೋಪದಿಂದ ಬೇಗ ಮುಕ್ತರಾಗಿ, ಮತ್ತೊಮ್ಮೆ ಮಂತ್ರಿಯಾಗಿ ಅದೇ ಸ್ಥಾನಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಹ ಪಕ್ಷದ ಸಂಘಟನೆ ದೃಷ್ಟಿಯಿಂದ ಯಾವ ಕೆಲಸವನ್ನು ಮಾಡಬೇಕೋ ಆ ಕೆಲಸ ಮುಂದುವರೆಸಿದ್ದಾರೆ.

ರಾಜೀನಾಮೆ ಕೊಟ್ಟ ಕೂಡಲೇ ಯಾವುದು ಬದಲಾವಣೆಯಾಗಲ್ಲ. ಅವರು ನಮ್ಮ ಜೊತೆಗೇನೆ ಇದ್ದಾರೆ. ಅವರನ್ನು ಹೋಗಿ ಮಾತನಾಡಿಸಿ, ಬರಯತ್ತೀದ್ದೀವಿ. ತನಿಖೆಗೆ ಆದೇಶ ಮಾಡಿದ್ದಾರೆ. ನಮಗೆ ಗೊತ್ತಿರುವ ಪ್ರಕಾರ ಅವರು ಯಾವುದೇ ಅಪರಾಧ ಮಾಡಿಲ್ಲ. ತನಿಖೆ ನಡೆಯಲಿ. ವಿಚಾರ ಆಗ ಹೊರಗೆ ಬರುತ್ತೆ ಎಂದು ಈಶ್ವರಪ್ಪ ಪರ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *