ಮಾಹಿತಿ ನೀಡಿದ್ರೆ ಸಾಕು ತನಿಖೆ ನಡೆಸುತ್ತೇವೆ : ಕಾಂಗ್ರೆಸ್ಸಿಗರಿಗೆ ಬಿಎಸ್ವೈ ವಿಶ್ವಾಸ

suddionenews
1 Min Read

ಬೆಂಗಳೂರು: ಬಿಟ್ ಕಾಯಿನ್ ಕೇಸ್ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿಗರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ. ಬಿಜೆಪಿಗರು ಕೂಡ ಪ್ರತ್ಯಾರೋಪ ಮಾಡ್ತಿದ್ದಾರೆ. ಸುಮ್ಮ ಸುಮ್ನನೆ ಹೇಳೋದಲ್ಲ ಯಾವುದಾದರೂ ಸಾಕ್ಷ್ಯಾಧಾರಗಳಿದ್ರೆ ನೀಡಿ ಎಂದಿದ್ದಾರೆ. ಇದೀಗ ಈ ವಾದ ಪ್ರತಿವಾದಗಳ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ಭರವಸೆಯೊಂದನ್ನ ನೀಡಿದ್ದಾರೆ.

ಬಿಟ್ ಕಾಯಿನ್ ಕೇಸ್ ಸಂಬಂಧ ಕಾಂಗ್ರೆಸ್ ನಾಯಕರ ಬಳಿ ಯಾವುದೇ ಮಾಹಿತಿ ಇರಲಿ. ಆ ಮಾಹಿತಿಯನ್ನ ನೀಡಲಿ ಸಾಕು. ಅದನ್ನ ಆಧರಿಸಿಯೇ ನಾವೂ ತನಿಖೆ ನಡೆಸುತ್ತೇವೆ. ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಮಾಹಿತಿ ನೀಡಲು ಮುಂದೆ ಬರಬೇಕು.‌ ಅದು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಬಳಿ ಮಾಹಿತಿ ಇದ್ದರೆ ತನಿಖೆ ನಡೆಸಲು ರೆಡಿ ಇದ್ದೇವೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಯಾರೇ ತಪ್ಪು ಮಾಡಿದ್ದರು ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಮಾಹಿತಿ ನೀಡಿದ್ರೆ ಸಾಕು ಎಂದಿದ್ದಾರೆ. ಜೊತೆಗೆ ಇದೇ ವೇಳೆ ಬಿಟ್ ಕಾಯಿನ್ ಕೇಸ್ ವಿಚಾರದಲ್ಲಿ ನಳೀನ್ ಕುಮಾರ್ ಕಟೀಲ್ ಮೌನ ವಹಿಸಿದ್ದು, ಆ ಬಗ್ಗೆ ಮಾತನಾಡಲು ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *