ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನ ಎಷ್ಟು ಜೋರಾಗಿತ್ತು ಅಂದ್ರೆ ಹೈಕಮಾಂಡ್ ತನಕವೂ ಹೋಗಿತ್ತು. ಬಳಿಕ ಇಬ್ಬರು ಮೊದಲು ಕೂತು ಮಾತಾಡಿ ಎಂದಾಗ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗದ ಅರೆಂಜ್ ಮಾಡಲಾಗಿತ್ತು. ಅಲ್ಲಿಂದ ನಾವಿಬ್ಬರು ಒಂದೇ ಎಂಬ ಒಗ್ಗಟ್ಟಿನ ಮಂತ್ರ ಸಾರಿದ್ದರು. ಇದೀಗ ಡಿಕೆ ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಗೆ ಆಹ್ವಾನ ಮಾಡಿದ್ದಾರೆ.
ಈ ಹಿಂದೆ ಅಂದ್ರೆ 2023ರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಅಂತ ಡಿಕೆ ಬ್ರದರ್ಸ್ ಕರೆದಿದ್ದರು. ಸಿದ್ದರಾಮಯ್ಯ ಅವರನ್ನು ಇಬ್ಬರು ಸ್ವಾಗತ ಮಾಡಿದ್ದರು. ಇದೀಗ ಈ ವರ್ಷ ಮತ್ತೊಮ್ಮೆ ಬ್ರೇಕ್ ಫಾಸ್ಟ್ ಗೆ ಆಹ್ವಾನ ನೀಡಿದ್ದಾರೆ. ಮೀಟಿಂಗ್ ನಲ್ಲಿ ಏನೆಲ್ಲಾ ಚರ್ಚೆಗಳು ನಡೆಯಬಹುದು ಎಂಬ ಕುತೂಹಲವೂ ಇದೆ.
ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡುತ್ತಾ, ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಬ್ರದರ್ಸ್ ರೀತಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಒಂದು ಗುಂಪು, ಸಿಡಂ ಅವರದ್ದು ಒಂದು ಗುಂಪು ಎಂದು ನೀವೂ ಮಾಧ್ಯಮಗಳಲ್ಲಿ ಹೇಳುತ್ತಿದ್ದೀರಿ. ಆದರೆ ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ನಾವೂ ಹುಟ್ಟುವಾಗ ಒಬ್ಬರೆ, ಸಾಯುವಾಗಲೂ ಒಬ್ಬರೆ. ಹೀಗಾಗಿ ಯಾವುದೇ ಗುಂಪು ಏಕೆ ಬೇಕು..? ನೀವೆಲ್ಲಾ ಏನೇನೋ ತೋರಿಸುತ್ತಿದ್ದೀರಾ. ಸಿದ್ದರಾಮಯ್ಯ ಅವರದ್ದು ಒಂದು ಗುಂಪು ಮತ್ತು ಡಿಕೆಶಿ ಅವರದ್ದು ಒಂದು ಗುಂಪು ಅಂತ ತೋರಿಸುತ್ತಿದ್ದೀರಾ.140 ಜನ ಶಾಸಕರು ಒಟ್ಟಿಗೆ ಇದ್ದಾರೆ. ಎಲ್ಲರನ್ನೂ ಕರೆದೊಯ್ಯುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂಬ ಮಾತನ್ನ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.




