Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಡಿಕೆಶಿ ಮನೆಯಲ್ಲಿ ಬ್ರೇಕ್ ಫಾಸ್ಟ್ ಮುಕ್ತಾಯ : ನಾಟಿಕೋಳಿ ಸಾರು, ಇಡ್ಲಿ ತಿಂದು ಏನೆಲ್ಲಾ ಮಾತಾಡಿದ್ರು..?

---Advertisement---

ಬೆಂಗಳೂರು: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದು ಬಂದಿದ್ದರು ಡಿಕೆ ಶಿವಕುಮಾರ್. ಅಂದು ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದರು. ಆ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಾಗಿದೆ. ಕುರ್ಚಿ ಕದನದ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ನಡೆಯುತ್ತಾ ಇದೆ. ಡಿಕೆ ಶಿವಕುಮಾರ್ ಮನೆಯಲ್ಲಿ ನಾಟಿ ಕೋಳಿ ಸಾರು, ಇಡ್ಲಿ, ವಡೆ, ಉಪ್ಪಿಟ್ಟು ಸವಿದು, ಮಾತುಕತೆ ನಡೆಸಿದ್ದಾರೆ.

ಈ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಶಾಸಕ ರಂಗನಾಥ್ ಕೂಡ ಭಾಗಿಯಾಗಿದ್ದರು. ಎಲ್ಲರು ಖುಷಿಯಿಂದ ಬ್ರೇಕ್ ಫಾಸ್ಟ್ ಸವಿದರು. ಆದರೆ ಡಿಕೆ ಶಿವಕುಮಾರ್ ಮಾತ್ರ ನಾಟಿಕೋಳಿ ಸಾಂಬಾರ್ ತಿಂದಿಲ್ಲ. ಕಳೆದ ಕೆಲವು ವರ್ಷಗಳಿಂದ ಡಿಕೆ ಶಿವಕುಮಾರ್ ಅವರು ನಾನ್ ವೆಜ್ ತಿನ್ನುವುದನ್ನ ಬಿಟ್ಟಿದ್ದಾರೆ ಎಂಬ ಮಾತಿದೆ.

ಸಿಎಂ ಕುರ್ಚಿಗಾಗಿ ಇಬ್ಬರ ಕಿತ್ತಾಟ ದೊಡ್ಡ ಮಟ್ಟಕ್ಕೆ ಹೋಗಿತ್ತು. ಅದರಲ್ಲೂ ಬಣಗಳು ಸಹ ಸೃಷ್ಟಿಯಾಗಿದ್ದವು. ಡಿಕೆ ಶಿವಕುಮಾರ್ ಬಣ, ಹೈಕಮಾಂಡ್ ತನಕವೂ ಹೋಗಿತ್ತು. ನಮ್ಮ ನಾಯಕರನ್ನ ಸಿಎಂ ಮಾಡಲೇಬೇಕು. ಸರ್ಕಾರ ರಚನೆಗೆ ಅವರ ಶ್ರಮವು ಇದೆ ಅಂಯತ ತಿಳಿಸಿದ್ರು. ಇತ್ತ ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಸಪೋರ್ಟ್ ಮಾಡುವ ಮಾತುಗಳನ್ನ ಆಡ್ತಾ ಇದ್ರು. CLP ಸಭೆಯಲ್ಲಿ ಈ ರೀತಿಯ ನಿರ್ಧಾರಗಳು ಆಗಿಲ್ಲ. ಅವರೇ ಐದು ವರ್ಷ ಸಿಎಂ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿಯೇ ಹೈಕಮಾಂಡ್ ನಾಯಕರು ಸಾಮರಸ್ಯ ಸಾಧಿಸಲು ಪ್ರಯತ್ನ ಪಡ್ತಿದೆ. ಅದರ ಭಾಗವಾಗಿಯೇ ನಡೆಯುತ್ತಿರೋದು ಬ್ರೇಕ ಫಾಸ್ಟ್ ಮೀಟಿಂಗ್.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...