ಚಿತ್ರದುರ್ಗ, ಮಾ.27 : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಚುನಾವಣೆ ಏಪ್ರಿಲ್ 13 ರಂದು ನಡೆಯಲಿದ್ದು, ರಾಜ್ಯ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಎಸ್. ರಘುನಾಥ್ ಮತ್ತು ಇವರ ತಂಡದಿಂದ ಚಿತ್ರದುರ್ಗ ಜಿಲ್ಲಾ ಜನ ಪ್ರತಿನಿಧಿ ಸ್ಥಾನದ ಅಭ್ಯರ್ಥಿಯಾಗಿ ವಿ. ವಾದಿರಾಜ ಅವರು ಬೆಂಗಳೂರಿನ ಗಾಯತ್ರಿ ಭವನದ ಕೇಂದ್ರ ಕಚೇರಿಯಲ್ಲಿ ಗುರುವಾರ ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿ ಎನ್. ವೆಂಕಟೇಶ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ AKBMS ಸದಸ್ಯರುಗಳು ಹಾಜರಿದ್ದು ಶುಭಕೋರಿದರು.


