ಅನಾರೋಗ್ಯದಿಂದ ಸಿಎಂ ಬದಲಾಗ್ತಾರೆ ಎಂದವರಿಗೆ ಬಸವರಾಜ್ ಬೊಮ್ಮಾಯಿ ಕೊಟ್ಟರು ಶಾಕ್..!

suddionenews
1 Min Read

ಬೆಳಗಾವಿ: ಬಸವರಾಜ್ ಬೊಮ್ಮಾಯಿ‌ ಸಿಎಂ ಸ್ಥಾನದಿಂದ ಇಷ್ಟರಲ್ಲೇ ಇಳಿಯುತ್ತಾರೆ. ಅವರಿಗೆ ಮಂಡಿ ನೋವಿದೆ, ಚಿಕಿತ್ಸೆಗೆ ಸಾಕಷ್ಟು ಸಮಯ ಬೇಕು. ಹೀಗಾಗಿ ಅವರು ಸಿಎಂ ಸ್ಥಾನ ತ್ಯಜಿಸಲಿದ್ದಾರೆ ಎಂಬ ಮತುಗಳು ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಆದರೀಗ ಆ ವಿಚಾರಕ್ಕೆ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯವೂ ಚೆನ್ನಾಗಿದೆ. ಹಾಗೇ ರಾಜ್ಯದ ಆರೊಗ್ಯವೂ ಚೆನ್ನಾಗಿದೆ. ನೋಡ್ತಾ ಇದ್ದೀರಲ್ವಾ ಎಂದು ಸಿಎಂ ಸ್ಥಾನಕ್ಕಾಗಿ ಕಾಯ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಇನ್ನು ಇದೇ ವೇಳೆ ರೈತರ ಬಗೆಗಿನ ಕಾಳಜಿಯ ಬಗ್ಗೆಯೂ ಮಾತನಾಡಿದ್ದಾರೆ. ರೈತರಿಗೆ ಬಹಳ ಬೇಗನೇ ಪರಿಹಾರ ನೀಡಿದ್ದೇವೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲಾಗಿದೆ. ಆ ಸಂಬಂಧ ಹಲವು ತೀರ್ಮಾನಗಳನ್ನ ತೆಗೆದುಕೊಂಡಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಡಬಲ್ ಪರಿಹಾರ ನೀಡಲಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *