ಬಿಎಸ್ವೈ ಮನಸ್ಸಿನಲ್ಲಿ ಎಷ್ಟೇ ನೋವಿದ್ದರು ಗಟ್ಟಿತನವಿದೆ : ಮಾಜಿ ಸಿಎಂ ಹೊಗಳಿದ ಹಾಲಿ ಸಿಎಂ

1 Min Read

 

ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಸಿಎಂ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ್ದಾರೆ. ಅವರು ಅಧಿಕಾರ ಇಲ್ಲದಿದ್ದರು ಜನರ ಮನದಲ್ಲಿರುತ್ತಾರೆ. ಬಿಎಸ್ವೈ ಮನಸ್ಸಿನಲ್ಲಿ ಎಷ್ಟೇ ನೋವಿದ್ದರು ಅವರಲ್ಲಿ ಗಟ್ಟಿತನವಿದೆ. ಒಂದೆರಡು ಘಟನೆಗಳನ್ನ ನನ್ನ ಜೀವನದಲ್ಲಿ ಮರೆಯೊಲ್ಲ.

ಸಿದ್ದರಾಮಯ್ಯ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ವಿಚಾರಗಳಲ್ಲಿ ಸಿದ್ದರಾಮಯ್ಯ ಅವರಿಗೆ ಸತ್ಯ ಗೊತ್ತಿದೆ. ಆದ್ರೂ ಜೋರಾಗಿ ಹೇಳಿದ್ರೆ ಜನ ನಂಬುತ್ತಾರೆಂದು ಮಾತನಾಡುತ್ತಾರೆ. ಕಳೆದ ಬಾರಿ ಬಿಎಸ್ವೈ, ಹೆಚ್ಡಿಕೆ ಸಿಎಂ ಆಗಲ್ಲ ಎಂದು ಹೇಳಿದ್ದರು. ಆದರೆ ಏನಾಯ್ತು ಅವರಿಬ್ಬರು ಮುಖ್ಯಮಂತ್ರಿಯಾಗಿದ್ದರು. ಅಧಿಕಾರಕ್ಕೆ ಬರುವುದಾಗಿ ಹೇಳಿದವರು ಅಧಿಕಾರಕ್ಕೆ ಬರಲಿಲ್ಲ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಿನ್ನೆ ನಾಲ್ಕು ಕಡೆ ಗೆಲುವು ಸಾಧಿಸಿತ್ತು. ಬಿಜೆಪಿಯೇ ಎರಡು ಮೂರು ಬಾರಿ ಗೆಲುವು ಸಾಧಿಸಿರೋದು. ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇ ಇಲ್ಲ. ಅಧಿಕಾರದಲ್ಲಿ ಇದ್ದು ಮತ್ತೆ ಗೆಲ್ಲುವುದೇ ಸಾಧನೆ. ಚುನಾವಣೆ ವೇಳೆಯಲ್ಲಿಯೇ ಜನ ನಾಡಿಮಿಡಿತ ತೋರಿಸೋದು. ನಾವೂ ಜನರ ವಿಶ್ವಾಸ ಗಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಶ್ರಮದ ಮೇಲೆ ವಿಶ್ವಾಸವಿದೆ. ಈಗ ಪ್ರಧಾನಿ‌ ಮೋದಿ ಪ್ಯಾನ್ ಇಂಡಿಯಾ ಆಗಿದ್ದಾರೆಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *