ಹೂ ತೆಗೆದುಕೊಳ್ಳೋ ನೆಪದಲ್ಲಿ ಬಾಂಬ್ ಬಿಟ್ಟು ಹೋದ : ಹೂ ಮಾರುಕಟ್ಟೆ ಜನ ಗಾಬರಿ..!

1 Min Read

ನವದೆಹಲಿ: ಹೂ ಮಾರುಕಟ್ಟೆಯಲ್ಲಿ ಬಾಂಬ್ ಇಟ್ಟ ಬ್ಯಾಗ್ ವೊಂದ‌ನ್ನ ಬಿಟ್ಟು ಹೋಗಿ ಜನರನ್ನ ಆತಂಕಕ್ಕೆ ದೂಡಿದ ಘಟನೆ ಪೂರ್ವ ದೆಹಲಿಯ ಘಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ನಡೆದಿದೆ.

ಹೂವಿನ ಮಾರುಕಟ್ಟೆಯಲ್ಲಿ ಭಾರೀ ಜನ ಸೇರಿದ್ದರು. ಸ್ಕೂಟಿಯಲ್ಲಿ ಬಂದ ವ್ಯಕ್ತಿ, ಒಂದು ಅಂಗಡಿಯಲ್ಲಿ ಹೂ ಖರೀದಿಸಿದ್ದಾನೆ. ಬಾಂಬ್ ಇದ್ದ ಬ್ಯಾಗ್ ನ್ನ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಬ್ಯಾಗ್ ನೋಡಿದ ಜನ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

ಬಳಿಕ ಬಾಂಬ್ ನಿಷ್ಕ್ರಿಯ ದಳದವರನ್ನ ಕರೆಸಿ, ಬಾಂಬ್ ಇರುವ ಬ್ಯಾಗ್ ಅನ್ನ ಜನ ಇರದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಬಾಂಬ್ ನಿಷ್ಕ್ರಿಯ ಗೊಳಿಸಿದ್ದಾರೆ. ಆ ಬ್ಯಾಗ್ ನಲ್ಲಿ ಸುಧಾರಿತ ಸ್ಪೋಟಕ ಸಾಧನ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *