25ರಲ್ಲಿ 12 ಸ್ಥಾನ ಗೆದ್ದ ಬಿಜೆಪಿ : ಜೆಡಿಎಸ್ ಬಗ್ಗೆ ಬಿಎಸ್ವೈ ಹೇಳಿದ್ದೇನು ಗೊತ್ತಾ..?

suddionenews
1 Min Read

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದೆ. ಬಿಜೆಪಿ ಸ್ಪರ್ಧಿಸಿದ್ದ 25 ಸ್ಥಾನಗಳಲ್ಲಿ 12 ಸ್ಥಾನ ತಮ್ಮದಾಗಿಸಿಕೊಂಡಿದೆ. ಬೆಳಗಾವಿಯಲ್ಲಿ ಇನ್ನು ಪೂರ್ಣ ಪ್ರಮಾಣದ ಫಲಿತಾಂಶ ತಿಳಿದು ಬಂದಿಲ್ಲ.

ಇನ್ನು ಜೆಡಿಎಸ್ ಬೆಂಬಲ ಕೋರಿದೆ, ಒಳಗೊಳಗೆ ಮಾತುಕತೆ ನಡೆದಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಬಿಜೆಪಿ ನಾಯಕರು ಅದಾಗಲೇ ಉತ್ತರವನ್ನು ನೀಡಿದ್ರು. ಬೆಂಬಲ‌ ಕೇಳಿರೋದು ಸತ್ಯ ಎಂದಿದ್ದರು. ಇದೀಗ ಬೆಜಿಪಿಗೂ ಬಹುಮತ ಬಂದಿದ್ದು, ಜೆಡಿಎಸ್ ಬಗ್ಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಮಗೆ ಬಹುಮತ ಬಂದಿದೆ. ಆದ್ರೆ ಜೆಡಿಎಸ್ ನ ನಿರ್ಲಕ್ಷ್ಯ ಮಾಡಲ್ಲ ಎಂದಿದ್ದಾರೆ.

ಇದೇ ವೇಳೆ ಪಕ್ಷ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 25ರ ಪೈಕಿ 15 ಸೀಟು ಗೆದ್ದೆ ಗೆಲ್ತೇವೆ ಎಂಬ ನಂಬಿಕೆ ಇತ್ತು. ಆದ್ರೆ 12 ಸೀಟು ನಮ್ಮದಾಗಿದೆ. ಬೆಳಗಾವಿಯಲ್ಲಿ ಮಾತ್ರ ನಮ್ಮ ನಿರೀಕ್ಷೆ ಸುಳ್ಳಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *