ಬಿಜೆಪಿ ಬಹಳ ಜಂಭ ಪಡುವ ಅಗತ್ಯವಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

suddionenews
1 Min Read

ಬೆಂಗಳೂರು: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮೇಲು ಗೈ ಸಾಧಿಸಿದೆ. ಇನ್ನೆನಿದ್ದರು ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ. ಕಾಂಗ್ರೆಸ್ ನಿರೀಕ್ಷೆ ಮಾಡಿದ ಮಟ್ಟಕ್ಕೆ ರೀಚ್ ಆಗಿಲ್ಲ.

ಪಂಚರಾಜ್ಯ ಚುನಾವಣಾ ಸೋಲಿನ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೋವಾದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿತ್ತು. ಪಂಜಾಬ್ ನಲ್ಲಿ ನಮ್ಮ ತಪ್ಪಿನಿಂದಾಗಿ ನಾವೂ ಸೋತಿದ್ದೇವೆ. ಉತ್ತರಾಖಂಡ್ ನಲ್ಲೂ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿತ್ತು. ಉತ್ತರ ಪ್ರದೇಶದಲ್ಲಿ ನಾವೂ ನಿರೀಕ್ಷೆ ಮಾಡಿರಲಿಲ್ಲ. ಇದರಿಂದ ಬಿಜೆಪಿ ಬಹಳ ಜಂಭ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಗೋವಾದಲ್ಲಿ ಇನ್ನು ಅತಂತ್ರ ಫಲಿತಾಂಶವಿದೆ. ಇದನ್ನ ಎನ್ ಕ್ಯಾಚ್ ಮಾಡಿಕೊಳ್ಳಲು ಬಿಜೆಪಿ ಫ್ಲ್ಯಾನ್ ಮಾಡಿದೆ. ಗೋವಾದಲ್ಲಿ ಸರ್ಕಾರ ರಚನೆಗೆ ಮುಂದಾಗಿರೋ ಬಿಜೆಪಿ ಪಕ್ಷ, ಇದಕ್ಕಾಗಿ ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆಗೆ ತಯಾರಿ ನಡೆಸಿದೆ. ಇನ್ನು ಕಾಂಗ್ರೆಸ್ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನ ಗೋವಾಗೆ ಕಳುಹಿಸಿದೆ.

Share This Article
Leave a Comment

Leave a Reply

Your email address will not be published. Required fields are marked *