ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆಯದ್ದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಪಕ್ಷವೇನೋ ಘೋಷಣೆ ಮಾಡಿ ಬಿಟ್ಟಿದೆ. ಇದರ ನಡುವೆ ಕೇಳಿದಷ್ಟು ಅಕ್ಕುಯನ್ನು ಕೊಡುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿಲ್ಲ. ಈ ಬಗ್ಗೆ ಇದೀಗ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ಕೇಂದ್ರ ಸರ್ಕಾರಕ್ಕೆ ಹಣ ಕೊಡ್ತೀವಿ ಅಕ್ಕಿ ಕೊಡಿ ಅಂತ ಕೇಳಿದ್ದೀವಿ. ಈಗಾಗಲೆ ಮುಖ್ಯಮಂತ್ರಿಗಳು ಬಹಳ ಗಂಭೀರವಾಗಿ ಪ್ರಯತ್ನ ಮಾಡ್ತಾ ಇದ್ದಾರೆ. ಛತ್ತಿಸ್ ಗಡದ ರಾಜ್ಯ ಸರ್ಕಾರ ಅಕ್ಕಿ ಕೊಡ್ತೀವಿ ಅಂತಿದೆ. ಆದರೆ ಟ್ರಾನ್ಸಪೋರ್ಟ್ ಚಾರ್ಜ್ ತುಂಬಾನೇ ಆಗುತ್ತೆ. ಹೀಗಾಗಿ ಯೋಚನೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ಅಕ್ಕಿ ಕೊಡಿ ಅಂತ ಕೇಳ್ತಿಲ್ಲ. ಹಣ ಕೊಡ್ತೀವಿ ಕೊಡಿ ಅಂತಾನೆ ಹೇಳಿದ್ದೀವಿ. ಬಿಜೆಪಿ ಸಂಸದರಿಗೆ ಒಳ್ಳೆಯದು ಮಾಡಲಿ. ನಮ್ಮ ರಾಜ್ಯದ ಸಂಸದರು, ಬಿಜೆಪಿ ನಾಯಕರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಕೇಂದ್ರಕ್ಕೆ ಕೇಳಲಿ ಎಂದಿದ್ದಾರೆ ಎಂದಿದ್ದಾರೆ.