ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ : ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕರ ಖಡಕ್ ಉತ್ತರ..!

1 Min Read

 

 

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾಂಬ್ ಸಿಡಿಸಿದ್ದರು. ಆ ಬಗ್ಗೆ ಇದೀಗ ಬಿಜೆಪಿ ನಾಯಕರು ಗರಂ ಆಗಿದ್ದು ಆ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಸಚಿವ ಆರ್ ಅಶೋಕ್, ಇದೇ ಸಿದ್ದರಾಮಯ್ಯ ಅವರು ಸೂರ್ಯ ಚಂದ್ರ ಇರೋವರೆಗೂ ಆ 17 ಶಾಸಕರನ್ನ ಮತ್ತೆ ಸೇರಿಸಿಕೊಳ್ಳಲ್ಲ ಎಂದು ಅಸೆಂಬ್ಲಿಯಲ್ಲೇ ಹೇಳಿದ್ರು. ಅದರ ದಾಖಲೆ ಇದೆ. ಹಾಗಾದ್ರೆ ಯಾವ ಮುಖ ಇಟ್ಟುಕೊಂಡು ಈ ರೀತಿ ಸಿದ್ದರಾಮಯ್ಯ ಹೇಳ್ತಾ ಇದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದ್ರೆ ನಾನು ಗಾಳಿಯಲ್ಲೇ ಗುಂಡು ಹೊಡೆಯುತ್ತೇನೆ. ಅವರು ರಿಯಲ್ ಆಗಿ ಹೇಳಿದ್ರೆ ನಾನು ರಿಯಲ್ ಆಗಿಯೇ ಹೇಳ್ತೇನೆ ಎಂದಿದ್ದಾರೆ.

ಬುಟ್ಟಿ ತೆಗೆದ್ರೆ ಎಲ್ಲವೂ ಗೊತ್ತಾಗುತ್ತೆ. ಹಾವಿದೆ ಹಾವಿದೆ ಅಂತಾರೆ. ಬುಟ್ಟಿ ತೆಗೆದ್ರೆ ಗೊತ್ತಾಗುತ್ತದೆ ಹಾವು ಇದೆಯಾ ಇಲ್ವಾ ಅಂತ. ಆ ಶಾಸಕ
ಎಸ್ ಟಿ ಸೋಮಶೇಖರ್ ಮೈಸೂರಿನಲ್ಲಿ ಮಾತಾಡಿದ್ದಾರೆ. ಇತ್ತೀಚೆಗೆ ಅದೊಂದು ಹವ್ಯಾಸ ಆಗಿಬಿಟ್ಟಿದೆ ಎಂದಿದ್ದಾರೆ.

ಬಿಜೆಪಿಯಿಂದಲೇ ಇರ್ತೇವೆ. ಯಾರು ಯಾರ ಮನೆಯ ಬಾಗಿಲು ಬಡಿದಿಲ್ಲ. ನಾವೇನು ಅರ್ಜಿ ಹಾಕಿ ಬೀದಿಯಲ್ಲಿ ನಿಂತಿಲ್ಲ. ಬಿಜೆಪಿ ನಮಗೆ ಎಲ್ಲವನ್ನು ಕೊಟ್ಟಿದೆ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *