ಮೋದಿಗಾಗಿ ಬಿಜೆಪಿ ನಾಯಕರಿಂದ ಮೃತ್ಯುಂಜಯ ಜಪ..!

suddionenews
1 Min Read

 

ಮಂಡ್ಯ :ಪ್ರಧಾನಿಗೆ ಪಂಜಾಬ್ ಸರ್ಕಾರದಿಂದ ಭದ್ರತೆ ವೈಫಲ್ಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪಂಜಾಬ್ ಸರ್ಕಾರ ಎಡವಿದೆ ಎಂಬುದಾಗಿಯೂ ಆರೋಪವೂ ಕೇಳಿ ಬಂದಿದೆ. ಜೊತೆಗೆ ಪ್ರಧಾನಿ‌ ಮೋದಿ ಕೂಡ ಒಂದು ಸ್ಟೇಟ್ಮೆಂಟ್ ನೀಡಿದ್ದರು. ಜೀವಂತವಾಗಿ ಕಳಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದರು.

ಇದೀಗ ಈ ಬೆನ್ನಲ್ಲೆ ಪ್ರಧಾನಿ ಮೋದಿಗೆ
ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ಮೃತ್ಯುಂಜಯ ಜಪ ಮಾಡಲಾಗಿದೆ. ಮಂಡ್ಯದ ಮದ್ದೂರಿನಲ್ಲಿರುವ ಕಾಶಿವಿಶ್ವೇಶ್ವರ ಪ್ರಸಿದ್ಧ ಕಾಶಿವಿಶ್ವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಲಾಗಿದೆ.

ಮದ್ದೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮೃತ್ಯುಂಜಯ ಜಪ ಮಾಡಿದ್ದು, ಮೃತ್ಯುಂಜಯ ಜಪ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

ದೇವರ ದಯೆಯಿಂದ ನಮ್ಮ ಪ್ರಧಾನಿ ರವರು ದೊಡ್ಡ ಅವಘಡದಿಂದ ಪಾರಾಗಿ ಬಂದಿರುವುದು ನಮ್ಮ ಭಾಗ್ಯ. ನಮ್ಮ ದೇಶದಲ್ಲಿ ಅಭಿವೃದ್ಧಿಗೆ ನಮ್ಮ ಪ್ರಧಾನಿ ಮೋದಿ ಉತ್ತಮ ಕೆಲಸವನ್ನ ಮಾಡ್ತಿದ್ದಾರೆ..
ಅವರ ಜೊತೆ ನಾವೆಲ್ಲರೂ ಕೈ ಜೊಡಿಸಿ, ಉನ್ನತ ಮಟ್ಟಕ್ಕೆ ಕರೆದೊಯ್ಯೋಣಾ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *