Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ : ಸೋಮಶೇಖರ್

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.23) : ರಾಜ್ಯದಲ್ಲಿ ಅಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ. ಜಿಲ್ಲೆಯಲ್ಲಿ ಆವರ ಶಾಸಕರು, ಸಂಸದರು, ಸಚಿವರು ಆಡಳಿತ ಪಕ್ಷವೂ ಸಹಾ ಇರಬಹುದು ಆದರೆ ಮತದಾರರ ಮನದಲ್ಲಿ ಬಿಜೆಪಿಯ ವಿರುದ್ದದ ಮನೋಭಾವ ಇದೆ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ತಿಳಿಸಿದರು.

ಎಂ.ಎಲ್.ಸಿ.ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತದ ವಿರೋಧ ಇದೆ, ನಮ್ಮ ಪರವಾಗಿ ಮತದಾರರು ಇದ್ದಾರೆ. ಚುನಾವಣೆಗೆ ಅರ್ಜಿಯನ್ನು ಹಾಕಿದ ಮೇಲೆ ಸ್ಪರ್ಧೆ ಮಾಡಬೇಕಿದೆ ಈ ಚುನಾವಣೆಯಲ್ಲಿ ಬೇರೆ ಪಕ್ಷದವರ ಎಷ್ಟೇ ಪ್ರಾಬಲ್ಯ ಇದ್ದರು ಸಹಾ ಸ್ಫರ್ಧೆ ಮಾತ್ರ ನಡೆಯುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಣೆ ಮಾಡಲಾಗಿದ್ದು, ಸಾವಯವ ಕೃಷಿಗೆ ಸಿದ್ದರಾಮಯ್ಯ ನಮವರು ನನ್ನನ್ನು ಆಧ್ಯಕ್ಷನನ್ನಾಗಿ ಮಾಡಿದ್ದರು. ಅಲ್ಲೂ ಸಹಾ ಉತ್ತಮವಾದ ಹೆಸರು ಮಾಡಿ ರೈತರಿಗೆ ಸಹಾಯ ಮಾಡಲಾಗಿದೆ ಎಂದು ಸೋಮಶೇಖರ್ ಹೇಳೀದರು.

ಚುನಾವಣೆ ಎಂದರೆ ನನಗೆ ಖುಷಿಯಾದ ವಿಚಾರ, ಈ ಚುನಾವಣೆಯಲ್ಲಿ ಸ್ಥಳೀಯ ಪರಕೀಯ ಎಂಬುದು ಇಲ್ಲ, ಈಗ ಸಂಸದರಾಗಿರುವ ನಾರಾಯಣಸ್ವಾಮಿ, ಸಚಿವರಾಗಿರುವ ಶ್ರೀರಾಮುಲು ಸಹಾ ಹೊರಗಿನವರೇ ಅಲ್ಲದೆ ಇಂದಿರಾಗಾಂಧಿಯವರು ಸಹಾ ಹೊರಗಿನಿಂದಲೇ ಬಂದವರು. ನಾವುಗಳು ಅವರನ್ನು ಸ್ವಾಗತ ಮಾಡಿದ್ದೇವೆ ನಾವು ಎಲ್ಲಿಂದಲೇ ಬಂದರು ಸಹಾ ಬಂದ ಮೇಲೆ ಇದು ನಮ್ಮ ಕ್ಷೇತ್ರ ಎಂಬ ಭಾವನೆ ಬರಬೇಕಿದೆ ಎಂದರು.

ಇಲ್ಲಿ ವಲಸಿಗರು, ಸ್ಥಳೀಯರು ಎಂಬ ಭಾವನೆ ಬೇಡ, ನಾನು ಹೊರಗಿನವರಾದರೂ ಗೆದ್ದ ಮೇಲೆ ಇಲ್ಲಿಯೇ ಇದ್ದು ಮತದಾರರ ಸಮಸ್ಯೆಗಳಿಗೆ ಸ್ಫಂದಿಸುತ್ತೇನೆ, ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ನಂತರ ಅದರ ಕಾರ್ಡ್ ಹಿಡಿಯುವುದಿಲ್ಲ. ನನಗೆ ನನ್ನದೆ ಆದ ಗುರುತು ಇದೆ ನಾನು ಸಹಾ ಕೃಷಿಕನಾಗಿ ಹೆಸರು ಮಾಡಿದ್ದೇನೆ ಎಂದು ಸೋಮಶೇಖರ್ ತಿಳಿಸಿದರು.

ಶಾಸಕರಾದ ರಘುಮೂರ್ತಿ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಮೂರು ಜನ ಶಾಸಕರಿದ್ದಾರೆ. ಇಲ್ಲಿ ಶಾಸಕರು ಮತದಾನ ಮಾಡುವುದಿಲ್ಲ ಆದರೆ ಮತವನ್ನು ಕೂಡಿಸುವ ಕಾರ್ಯವನ್ನು ಮಾಡುತ್ತಾರೆ. ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಇಲ್ಲಿ ಮತದಾರರಾಗಿರುತ್ತಾರೆ. ಇವರು ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಹಿಂದಿನ ಶಾಸಕರು ಈ ಬಾರಿ ನಾನು ಸ್ಪರ್ಧೆ ಮಾಡುವುದಿಲ್ಲ ಬೇರೆಯವರಿಗೆ ಆವಕಾಶ ನೀಡುವಂತೆ ಹೇಳಿದಾಗ ಇವರಿಗೆ ಪಕ್ಷ ಟಿಕೇಟ್ ನೀಡಿದೆ. ಇಲ್ಲಿ ವಿಧಾನ ಪರಿಷತ್ ಸದಸ್ಯರು ಎಂ.ಎಲ್.ಎ. ರೀತಿಯಲ್ಲಿ ನೇರವಾಗಿ ಕೆಲಸ ಮಾಡುವುದಿಲ್ಲ ಆವರಿಗೆ ಬರುವ ಅನುದಾನವನ್ನು ತಮ್ಮ ಕ್ಷೇತ್ರದ ಅಭಿವೃದ್ದಿಗೆ ಎಂ.ಎಲ್.ಎ.ರವರ ಜೊತೆ ಗೂಡಿ ಕೆಲಸವನ್ನು ಮಾಡುತ್ತಾರೆ. ಇದರಿಂದ ಅವರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಶಾಸಕ ರಘುಮೂರ್ತಿ ತಿಳಿಸಿದರು.

ಜಿಲ್ಲಾ ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

ಮತ ಚಲಾಯಿಸಲು ಯಾವ ದಾಖಲೆಗಳು ಬೇಕು ? ಇಲ್ಲಿದೆ ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ :  ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12

error: Content is protected !!