ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ : ಮನೀಷ್ ಸಿಸೋಡಿಯಾ ಗಂಭೀರ ಆರೋಪ

 

ನವದೆಹಲಿ: ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ ಎಂಬ ಆತಂಕ ಶುರುವಾಗಿದೆ. ಹೀಗಾಗಿ ಸಿಎಂ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವುದಕ್ಕೆ ಬಿಜೆಪಿ ಸಂಚು ರೂಪಿಸಿದೆ ಎಂದು ಡಿಸಿಎಂ ಮನೀಷ್ ಸಿಸೋಡಿಯಾ ಗಂಭೀರ ಆರೋಪ ಮಾಡಿದೆ.

ಇಂಥಹ ಕ್ಷುಲಕ ರಾಜಕೀಯಕ್ಕೆ ನಾವೂ ಹೆದರುವುದಿಲ್ಲ ಎಂದಿರುವ ಮನೀಶ್ ಸಿಸೋಡಿಯಾ, ಇದರಲ್ಲಿ ಸಂಸದ ಮನೋಜ್ ತಿವಾರಿಯ ಕೈವಾಡವಿದೆ. ಈಗಾಗಲೇ ತಿವಾರಿ ಕೊಲೆ ಬೆದರಿಕೆ ಹಾಕಿದ್ದಾರೆ. ಗುಜರಾತ್ ಹಾಗೂ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ ಎಂಬ ಆತಂಕವಿದೆ. ಹೀಗಾಗಿ ಕೇಜ್ರಿವಾಲ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ಇದರಲ್ಲಿ ಮನೋಜ್ ತಿವಾರಿಯ ಕೈವಾಡವೂ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಎಫ್ಐಆರ್ ದಾಖಲಿಸುತ್ತೇವೆ. ಕೇಜ್ರಿವಾಲ್ ಅವರ ಸುರಕ್ಷತೆ ಬಗ್ಗೆ ನಮಗೆ ಆತಂಕವಿದೆ ಎಂದಿದ್ದಾರೆ.

ಎಎಪಿ ಪಕ್ಷದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮನೋಜ್ ತಿವಾರಿ, ಇವತ್ತು ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ಇದು ಆಪ್ ಪಕ್ಷದಿಂದ ಮರ್ಡರ್ ಸ್ಕ್ರಿಪ್ಟ್, ಹತ್ಯೆಯ ಆರೋಪಗಳು ಹಳೆಯದ್ದು. ಅದು ಯಾವಾಗಲೂ ಆರೋಪ ಮಾಡುತ್ತಲೇ ಇರುತ್ತದೆ. ಆಪ್ ಪಕ್ಷದ ಶಾಸಕರಿಗೆ ಜನರೇ ನೇರವಾಗಿ ಹೊಡೆದಿದ್ದಾರೆ ಎಂದು ಉತ್ತರ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *