ಬಿಕ್ಲು ಶಿವನ ಕೊಲೆ ಪ್ರಕರಣ : ಶಾಸಕ ಭೈರತಿ ಬಸವರಾಜ್ ಅರೆಸ್ಟ್..!

1 Min Read

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು ಸಹ, ಜಾಮೀನು ಸಿಕ್ಕಿರಲಿಲ್ಲ. ಶರಣಾಗತಿಯೊಂದೆ ಉಳಿದಿತ್ತು. ಇದೀಗ ಪೊಲೀಸರು ಭೈರತಿ ಬಸವರಾಜ್ ಅವರನ್ನ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಶಾಸಕರ ಬಂಧನವಾಗಿದೆ.

ಭೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದಾನೇ ಬಿಕ್ಲು ಶಿವನ ಕೊಲೆಯಾಗಿದೆ ಎಂದು ಪೊಲೀಸರು ಆರೋಪಿಸಿದ್ದರು. ಹೀಗಾಗಿ ಕೋರ್ಟ್ ನಲ್ಲಿ ಜಾಮೀನು ಕೂಡ ಸಿಕ್ಕಿರಲಿಲ್ಲ. ಬಂಧನಕ್ಕೂ ಸುಲಭವಾಗಿತ್ತು. ಗುಜರಾತ್ ನಿಂದ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆಯೇ ಪೊಲೀಸರು ಕೂಡ ಅರೆಸ್ಟ್ ಮಾಡಿದ್ದಾರೆ.

ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು ಕೂಡ ಆರೋಪಿಯಾಗಿದ್ದರು. ಹೀಗಾಗಿ ಪೊಲೀಸರು ಯಾವ ಕ್ಷಣದಲ್ಲಿ ಬೇಕಾದರೂ ಅರೆಸ್ಟ್ ಮಾಡುವ ಸಾಧ್ಯತೆ ಇತ್ತು. ಈ ವಿಚಾರ ತಿಳಿದ ಶಾಸಕರು ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಇನ್ನು ಸೆರಂಡರ್ ಆಗದೆ ಬೇರೆ ವಿಧಿ ಇಲ್ಲ ಎಂದು ತಿಳಿದ ಮೇಲೆ ಬೆಂಗಳೂರಿನ ಕಡೆಗೆ ಬಂದಿದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ ಶಾಸಕರು. ಮುಂದಿನ ದಿನಗಳಲ್ಲಿ ಜಾಮೀನು ಸಿಗುತ್ತಾ ಅಥವಾ ಜೈಲಲ್ಲಿ ಲಾಕ್ ಆಗ್ತಾರಾ ಎಂಬುದು ತನಿಖೆಯ ನಂತರ ತಿಳಿಯಲಿದೆ.

Share This Article
Enable Notifications OK No thanks