ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯ್ತಿಯಲ್ಲಿ ತಪ್ಪದೆ ಎಸ್ ಆರ್ ನೋ ರೌಂಡ್ ಇದ್ದೆ ಇರುತ್ತದೆ. ಪ್ರತಿ ಸೀಸನ್ ನಲ್ಲೂ ಈ ರೌಮನಡ್ ಮಾಡಿಕೊಂಡು ಬರುತ್ತಾರೆ. ಸ್ಪರ್ಧಿಗಳ ನಡವಳಿಕೆ ಮೇಲೆ ಪ್ರಶ್ನೆಯನ್ನ ಕೇಳ್ತಾರೆ. ಮನೆ ಮಂದಿಗೆ ಅವರ ಮೇಲಿರುವ ಅಭಿಪ್ರಾಯವನ್ನ ಆ ರೌಂಡ್ ಮೂಲಕ ಅರ್ಥ ಮಾಡಿಸುತ್ತಾರೆ. ಆದರೆ ಕೆಲವರಿಗೆ ಅದು ಅರ್ಥವೇ ಆಗುವುದಿಲ್ಲ.
ಎಲ್ಲರ ಕೈಗೂ ಬೋರ್ಡ್ ಗಳನ್ನ ಕೊಟ್ಟು, ಚೈತ್ರಾ ಬಗ್ಗೆ ಪ್ರಶ್ನೆ ಕೇಳಲಾಯ್ತು. ಈ ಮನೆಗೆ ಬೇಡದ ವ್ಯಕ್ತಿ ಚೈತ್ರಾ ಎಂಬ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳುತ್ತಾರೆ. ಇದಕ್ಕೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸಿದ್ದ ಸುದೀಪ್, ರಜತ್ ಕಡೆಯಿಂದ ಎಸ್ ಎಂದೇ ಬರುತ್ತೆ ಎಂದು ವೀಕ್ಷಕರು ಬಯಸುತ್ತಿದ್ದರು. ಆದರೆ ರಜತ್ ಸೆಕೆಂಡ್ ಕಾದು ಆಮೇಲೆ ನೋ ಎಂಬ ಉತ್ತರ ತೋರಿಸಿದರು. ಇದು ಸುದೀಪ್ ಅವರಿಗೂ ಶಾಕ್ ಆಗಿತ್ತು. ಯಾಕಂದ್ರೆ ರಜತ್ ಸಿಕ್ಕಾಪಟ್ಟೆ ರೇಗಿಸುವುದು ಚೈತ್ರಾ ಅವರನ್ನೇ. ತಮ್ಮ ಬಾಸ್ ಬಾಸ್ ಅಂತ ಹೇಳಿ ಹೇಳಿ ರೇಗಿಸುತ್ತಾನೇ ಇರುತ್ತಾರೆ. ಹೀಗಾಗಿ ರಜತ್ ಏನು ಉತ್ತರ ಕೊಡಬಹುದು ಎಂಬ ಕುತೂಹಲವಿತ್ತು.
ರಜತ್ ನೋ ಎಂಬ ಆಪ್ಶನ್ ತೋರಿಸಿದಾಗ ಕಿಚ್ಚ ಶಾಕಿಂಗ್ ರಿಯಾಕ್ಷನ್ ಕೊಟ್ರು. ಅದಕ್ಕೆ ರಜತ್ ಕೊಟ್ಟ ಉತ್ತರ ‘ಬಿಗ್ ಬಾಸ್ ಮನೆಗೆ ಚೈತ್ರಾ ಬಹಳ ಮುಖ್ಯ ಸರ್. ಯಾವಾಗ ಹೇಗಿರಬೇಕು, ಕ್ಯಾಮರಾ ಎಲ್ಲಿದೆ, ಅಲ್ಲಿ ಹೇಗಿರಬೇಕು ಎಂಬುದೆಲ್ಲ ಗೊತ್ತು. ಬಿಗ್ ಬಾಸ್ ಅನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋದು ಚೈತ್ತಾ ಮಾತ್ರ. ಆದ್ರೆ ಶನಿವಾರ ಮಾತ್ರ ಲಿಪ್ ಸ್ಟಿಕ್ ಹಾಕಿ ಬರೋಲ್ಲ’ ಎಂದು ಬೇಸರ ಹೊರ ಹಾಕಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್