ಬೆಂಗಳೂರು: ಇತ್ತಿಚೆಗಷ್ಟೇ ನಂದಿನಿ ಹಾಲಿನ ದರ ಹೆಚ್ಚಳವಾಗಿದೆ. ಈಗ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ.ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಲೀಟರ್ ಗೆ ಐದು ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ದರ ಹೆಚ್ಚಳದ ವಿಚಾರವನ್ನು ಇದೀಗ ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನಿಸಬೇಕಿದೆ. ಯಾಕಂದ್ರೆ ದರ ಪ್ರಸ್ತಾವನೆಯನ್ನು ಕೆಎಂಎಫ್ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
ಹಾಲಿನ ದರ ಏರಿಕೆ ಮಾಡುವುದಕ್ಕೆ ಕೆಎಂಎಫ್ ಸಿದ್ದರಾಮಯ್ಯ ಅವರ ಅನುಮತಿಗಾಗಿ ಕಾಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವೆಉ ಅನುಮತಿ ನೀಡಿದ ಬೆನ್ನಲ್ಲೇ ದರ ಏರಿಕೆ ಮಾಡಲಿದೆ ಹಾಲಿನ ದರ ಏರಿಕೆ ಮಾಡಬೇಕು ಎಂದು ಕೆಎಂಫ್ ಮುಂದೆ ರೈತರು ಪ್ರತಿಭಟನೆ ಮಾಡಿದ್ದರು. ಹೀಗಾಗಿ ದರ ಏರಿಕೆಗೆ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಡಲಾಗಿದೆ.
ಜಾನುವಾರುಗಳಿಗೆ ನೀಡುತ್ತಿರುವ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ. ಮೇವು, ಲೇಬರ್, ವಿದ್ಯುತ್ ಸೇರಿ ಇತರೆ ಎಲ್ಲಾ ಬೆಲೆಯೂ ಹೆಚ್ಚಾಗಿದೆ. ದಿನೇ ದಿನೇ ಖರ್ಚುಗಳು ಕೂಡ ಹೆಚ್ಚಾಗುತ್ತಿದೆ. ಇದರಿಂದ ಹಾಲಿನ ದರ ಅನಿವಾರ್ಯವಾಗಿದೆ. ದರ ಏರಿಕೆ ಮಾಡದೆ ಹೋದಲ್ಲಿ ರೈತರಿಗೆ ಉತ್ಪಾದನೆಗೆ ತಕ್ಕಂತೆ ದರ ನೀಡಲು ಒಕ್ಕೂಟಗಳಿಗೆ ಸಾಧ್ಯವಿಲ್ಲ ಎಂಬುದು ಒಕ್ಕೂಟಗಳ ಅಭಿಪ್ರಾಯ. ಹಾಗೇ ಕೆಲವು ದಿನಗಳ ಹಿಂದೆ ಕೆಎಂಎಫ್ ಮುಂದೆ ಪ್ರತಿಭಟನೆಯನ್ನು ಮಾಡಿತ್ತು. ರೈತರ ಪ್ರತಿಭಟನೆಗೆ ಮಣಿದಿರುವ ಕೆಎಂಎಫ್ ದರ ಏರಿಕೆಯ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದೆ. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ದರ ಏರಿಕೆ ಮಾಡಲಿದೆ. 5 ರೂಪಾಯಿ ಏರಿಸಲು ಪ್ಲ್ಯಾನ್ ನಡೆದಿದ್ದು ಸಿಎಂ ಸಿದ್ದರಾಮಯ್ಯ ಅವರು ಎಷ್ಟು ದರ ಏರಿಸಲು ಅನುಮತಿ ಕೊಡ್ತಾರೆ ನೋಡಬೇಕಿದೆ.






