ಹಣೆಗೆ ಸಿಂಧೂರ ಯಾಕಿಟ್ಟಿಲ್ಲ ಎಂದ ಭಜರಂಗದಳದವರಿಗೆ ತುಮಕೂರಿನ ಮಹಿಳೆ ಹಾಕಿದ ಆವಾಜ್ ನೋಡಿ..!

suddionenews
1 Min Read

ತುಮಕೂರು: ಇತ್ತೀಚೆಗೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ದಲಿತರ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದ್ದಕ್ಕೆ ಭಜರಂಗದಳದವರು ಪ್ರಶ್ನಿಸಿರುವ ಘಟನೆ ನಡೆದಿದೆ.

ಆ ಗುಂಪಿನವರು ಹಿಂದುತ್ವವಾದಿಗಳು ಅಂತ ಹೇಳಿಕೊಂಡು ಬಂದವರು ಗಲಾಟೆ ಮಾಡಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಳಿ ದೇವಾಲಯ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಮನೆಗೆ ಹೋಗಿ ಕ್ರಿಸ್ಮಸ್ ಮಾಡುತ್ತಿದ್ದನ್ನ ಪ್ರಶ್ನಿಸಿದ್ದಾರೆ. ಮಹಿಳೆಗೆ ಹಣೆಗೆ ಯಾಕೆ ಸಿಂಧೂರ ಇಟ್ಟಿಲ್ಲ..? ಕ್ರಿಸ್ಮಸ್ ಯಾಕೆ ಆಚರಣೆ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಸರಿಯಾಗಿ ಆವಾಜ್ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಾದ-ವಿವಾದದಲ್ಲಿ ಭಾಗಿಯಾದ ಎರಡೂ ಗುಂಪುಗಳಿಂದ ದೂರುಗಳಿದ್ದರೂ ಪ್ರಕರಣ ದಾಖಲಾಗಿಲ್ಲ. ಆ ಕುಟುಂಬವು ಕ್ರಿಸ್‌ಮಸ್ ಆಚರಿಸುತ್ತಿತ್ತು. ಆದರೆ, ಕೆಲವು ಪುರುಷರು ಅಲ್ಲಿಗೆ ಹೋಗಿ ಅಡ್ಡಿಪಡಿಸಿದ್ದಾರೆ. ಇದು ಕೇವಲ ವಾದವಾಗಿದೆ ಮತ್ತು ಯಾವುದೇ ಹಿಂಸಾಚಾರ ನಡೆದಿಲ್ಲ. ನಾವು ಪ್ರಕರಣವನ್ನು ದಾಖಲಿಸಿಲ್ಲ ಎಂದು ಕುಣಿಗಲ್ ಠಾಣೆಯ ಪೊಲೀಸ್ ನಿರೀಕ್ಷಕ ರಾಜು ಪಿ. ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *