ಭೈರತಿ ರಣಗಲ್ ಭರ್ಜರಿ ಯಶಸ್ಸು : ಆದರೆ ಶಿವಣ್ಣ ವಿರುದ್ದ ಅಪ್ಪು ಫ್ಯಾನ್ಸ್ ಬೇಸರ..!

suddionenews
1 Min Read

 

ಬೆಂಗಳೂರು, ನವೆಂಬರ್. 16 : ಶಿವಣ್ಣ ಅಭಿನಯದ ಭೈರತಿ ರಣಗಲ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಫ್ತಿ ಸಿನಿಮಾ ನೋಡಿದ ಅಭಿಮಾನಿಗಳು ಕೆಲ ವರ್ಷಗಳಾದರು ಕೂಡ ಅದೇ ಗುಂಗಲ್ಲಿ ಇದ್ದರು. ಮತ್ತೆ ನರ್ತನ್ ಹಾಗೂ ಶಿವಣ್ಣ ಒಂದಾಗಿದ್ದು ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ಶಿವಣ್ಣನ ಎಂಟ್ರಿಗೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಸಿನಿ ಪ್ರೇಮಿಗಳು ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಲ್ಲಿದ್ದಾರೆ. ಆದರೆ ಇದರ ನಡುವೆ ಅಪ್ಪು ಅಭಿಮಾನಿಗಳಿಗೆ ಭೈರತಿ ರಣಗಲ್ ಸಿನಿಮಾ ನಡೆ ಬೇಸರ ತರಿಸಿದೆ.

ಅಪ್ಪು ಅಗಲಿಕೆ ಬರಿಸಲಾರದ ನಷ್ಟ. ಯಾವುದೇ ಸಿನಿಮಾ ರಿಲೀಸ್ ಆದರೂ ಸಿನಿಮಾ ತಂಡದವರು ಆರಂಭದಲ್ಲಿಯೇ ಅಪ್ಪು ಫೋಟೋ ಹಾಕಿ ನಮನ ಸಲ್ಲಿಸುತ್ತಾರೆ. ಆದರೆ ಭೈರತಿ ರಣಗಲ್ ಸಿನಿಮಾ ಆ ರೀತಿ ಮಾಡಿಲ್ಲ. ಅಪ್ಪು ಫೋಟೋವನ್ನೇ ಬಳಸಿಕೊಂಡಿಲ್ಲ. ದೊಡ್ಮನೆ ಪ್ರೊಡಕ್ಷನ್ ನಲ್ಲೇ ತಯಾರಾದ ಸಿನಿಮಾ ಇದು. ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ಭೈರತಿ ರಣಗಲ್ ನಿರ್ಮಾಣವಾಗಿದೆ. ಹೀಗಾಗಿ ಅಪ್ಪು ಫ್ಯಾನ್ಸ್ ನೇರವಾಗಿಯೇ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಇದಕ್ಕೆ ಶಿವಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮ ಒಂದರಲ್ಲಿ ಭೈರತಿ ರಣಗಲ್ ಬಗ್ಗೆ ಮಾತನಾಡಲಾಗಿದೆ. ಆ ಸಮಯದಲ್ಲಿ ಅಭಿಮಾನಿಯೊಬ್ಬರ ಕರೆಯನ್ನು ಸ್ವೀಕರಿಸಲಾಗಿತ್ತು. ಅಪ್ಪು ಅಭಿಮಾನಿ ಈ ಪ್ರಶ್ನೆಯನ್ನು ನೇರವಾಗಿ ಶಿವಣ್ಣನಿಗೆ ಕೇಳಿದ್ದಾರೆ. ‘ನಿಮಗಿಂತ ಮೊದಲು ನಾನು ಅಪ್ಪು ಅಭಿಮಾನಿ. ಯಾವುದೇ ಸಿನಿಮಾ ರಿಲೀಸ್ ಆದ್ರೂ ಫಸ್ಟ್ ಡೇ ಫಸ್ಟ್ ಶೋ ನೋಡ್ತಾ ಇದ್ದೆ. ಅಪ್ಪು ಇಲ್ಲ ಎಂದು ನಾನ್ಯಾವತ್ತು ಭಾವಿಸಿಲ್ಲ. ಅದಕ್ಕೆ ಅಪ್ಪು ಫೋಟೋ ಹಾಕಿಲ್ಲ. ಅಪ್ಪು ಇರಬೇಕಾಗಿರುವುದು ಫೋಟೋದಲ್ಲಲ್ಲ ನಮ್ಮ ಮನಸ್ಸಲ್ಲಿ’ ಎಂದು ಶಿವಣ್ಣ ಉತ್ತರ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *