ಬೆಳಗಾವಿಯಲ್ಲಿ ಪೂಜೆಯ ಬಳಿಕ ತೀರ್ಥದ ಜೊತೆಗೆ ಕೃಷ್ಣನನ್ನು ನುಂಗಿದ ವ್ಯಕ್ತಿ : ಹೊರತೆಗೆದಿದ್ದು ಹೇಗೆ ಗೊತ್ತಾ..?

suddionenews
1 Min Read

ಬೆಳಗಾವಿ: ಪೂಜೆ ಮಾಡಿ ತೀರ್ಥ ಸೇವಿಸುವಾಗ ವ್ಯಕ್ತಿಯೊಬ್ಬ ಲೋಹದ ಕೃಷ್ಣನನ್ನೆ ನುಂಗಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. 45 ವರ್ಷದ ವ್ಯಕ್ತಿ ಈ ರೀತಿಯಾಗಿ ವಿಗ್ರಹ ನುಂಗಿರುವುದು ಬೆಳಕಿಗೆ ಬಂದಿದೆ.

ನಿತ್ಯ ಪೂಜೆ ಮಾಡುತ್ತಿದ್ದ ವ್ಯಕ್ತಿ ಮಾಮೂಲಿಯಂತೆ ಪೂಜೆ ಮಾಡಿ ತೀರ್ಥ ಸೇವಿಸಿದ್ದಾನೆ. ಈ ವೇಳೆ ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನು ನುಂಗಿದ್ದಾನೆ. ನಂತರ ಗಂಟಲು ಊತ ಬಂದಿದೆ. ಗಾಬರಿಯಾದ ವ್ಯಕ್ತಿ ಸ್ಥಳೀಯ ಆಸ್ಪತ್ರೆಗೆ ಹೋದಾಗ, ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್ ಮಾಡ್ಸಿದ್ದಾನೆ. ಆಗ ಸ್ಕ್ಯಾನಿಂಗ್ ನಲ್ಲಿ ಗಂಟಲಲ್ಲಿ ಲೋಹ ಕಂಡಿದೆ.

ಇದರಿಂದ ತಕ್ಷಣ ಆತನಿಗೆ ಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆಯ ನಂತರ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ. ಇದನ್ನು ಕಂಡು ಆ ವ್ಯಕ್ತಿಯೇ ಗಾಬರಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *