ರಾಜಾಹುಲಿ ಇರಲಿ, ಯಾರೇ ಇರಲಿ ಮೊದಲು ರಾಜೀನಾಮೆ ಕೊಡಲಿ : ಬಿಎಸ್ವೈ ವಿರುದ್ಧ ಯತ್ನಾಳ್ ಕಿಡಿ

1 Min Read

ಬೆಂಗಳೂರು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಹಿನ್ನೆಲೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಬಸನಗೌಡ ಯತ್ನಾಳ್ ಬಿಎಸ್ವೈ ವಿರುದ್ಧ ಕೆಂಡಕಾರಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದಿದ್ದಾರೆ.

ಎಷ್ಟೇ ದೊಡ್ಡ ಹುಲಿಯಾದರೂ ಕಾನೂನಿನ ಮುಂದೆ ಎಲ್ಲರು ಒಂದೇ. ಈ ಹಿಂದೆ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಅಡ್ವಾಣಿ ಅವರು ಎಲ್ಲಾ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ರಾಜಾಹುಲಿ ಇರಲಿ, ಯಾರೇ ಇರಲಿ ಮೊದಲು ರಾಜೀನಾಮೆ ಕೊಡಲಿ. ಅಡ್ವಾಣಿ, ವಾಜಪೇಯಿ ಅವರಗಿಂತ ದೊಡ್ಡವರಾ ಇವರು..? ಮೊದಲು ಎಲ್ ಕೆ ಅಡ್ವಾಣಿ ಅವರ ಆದರ್ಶ ಪಾಲಿಸಲಿ ಎಂದಿದ್ದಾರೆ.

ಇದೆ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಕಾಂಗ್ರೆಸ್ ನವರಿಗೆ ಬೊಮ್ಮಾಯಿ, ಬಿಎಸ್ವೈ ಅಂದ್ರೆ ಭಯವಿಲ್ಲ. ಕಾಂಗ್ರೆಸ್ ಗೆ ಯತ್ನಾಳ್ ಅಂದ್ರೆ ಭಯ ಜಾಸ್ತಿ. ಯತ್ನಾಳ್ ಸಿಎಂ ಆಗಿಬಿಟ್ಟರೆ ಜೈಲಿಗೊಬ್ಬರು, ಕಾಡಿಗೊಬ್ಬರು ಹೋಗಬೇಕು. ತಿಹಾರ್ ಜೈಲಿನಲ್ಲಿ ಬಂಡೆ ಗಿಂಡೆ ಇಲ್ಲ ಓನ್ಲಿ ಸಂಡೇ. ಹೀಗಾಗಿ ಯತ್ನಾಳ್ ಎಂದರೆ ಕಾಂಗ್ರೆಸ್ ನವರಿಗೆ ಭಯ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *