ಬಸವಣ್ಣನವರು ಎಲ್ಲ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಜ್ಞಾನ ದಾಸೋಹ ಉಣ ಬಡಿಸಿದರು :ಡಾ. ಅಜಯ್ ಧರ್ಮಸಿಂಗ್

suddionenews
1 Min Read

ಚಿತ್ರದುರ್ಗ, (ಆ.05) :  ಬಸವಣ್ಣನವರು ಎಲ್ಲ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಜ್ಞಾನ ದಾಸೋಹ ಉಣ ಬಡಿಸಿದರು. ಮುರುಘಾ ಶರಣರು ಅವರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾಕ್ಟರ್ ಅಜಯ್ ಧರ್ಮಸಿಂಗ್ ಹೇಳಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಎಸ್ ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಚಿತ್ರದುರ್ಗ ಇವರ ಸಹಯೋಗದಲ್ಲಿ ಮೂವತ್ತೆರಡು ವರ್ಷದ ಎಂಟನೆ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸುಮಾರು ಹದಿನೇಳು ಸಾವಿರ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾಗಿರುವುದು ದಾಖಲೆ ಯಾದುದು ಎಲ್ಲಿಯೂ ಪ್ರತಿ ತಿಂಗಳು ವಿವಾಹ ಮಾಡುವ ಪದ್ಧತಿಯಿಲ್ಲ.

ಆಷಾಢ ರಾಹುಕಾಲ ಇಂತಹ ಯಾವುದೇ ಯಾವುದೇ ಮೌಢ್ಯಕ್ಕೆ ಆಸ್ಪದ ಕೊಡದೆ ಶರಣರು ಕಲ್ಯಾಣ ಮಹೋತ್ಸವ ನಡೆಸಿಕೊಡುತ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಅತ್ಯಂತ ಸಂತಸವಾಗಿದೆ ಎಂದರು .ರಾಣೇಬೆನ್ನೂರು ಸಿದ್ಧಾರೂಢ ಆಶ್ರಮದ ಮರುಳಶಂಕರ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ ಜಾತಿ ಜನಾಂಗದ ಭೇದ ಭಾವ ಇಲ್ಲದೆ ಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ನವ ವಧು ವರರು ಇಲ್ಲಿ ವಿವಾಹವಾಗುತ್ತಿರುವುದು ನಿಮ್ಮ ಪುಣ್ಯವೇ ಸರಿ ನನ್ನಂಥವರಿಗೂ ಪ್ರವರ್ಗ ಒಂದರಲ್ಲಿ ಮುಸ್ಲಿಂ ಬಾಂಧವರು ನನ್ನನ್ನು ದೀಕ್ಷೆಕೊಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದರು .ಬಸವತತ್ವದ ಅಪ್ಪಟ ಅಭಿಮಾನಿಗಳಾದ ಶ್ರೀಗಳು ಹನ್ನೆರಡನೆ ಶತಮಾನದ ತತ್ತ್ವ ಸಿದ್ಧಾಂತಗಳನ್ನು ಯಥಾವತ್ತಾಗಿ ಮುಂದುವರಿಸಿದ್ದಾರೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾಕ್ಟರ್ ಶಿವಮೂರ್ತಿ ಮುರುಘಾ ಶರಣರು ಬಡವರ ಕಲ್ಯಾಣ ಮಾಡುವಲ್ಲಿ ದೇವರಿದ್ದಾರೆ ಇದು ಪಾವನ ಸಂದರ್ಭ ಮಾನವನ ಆಯುಷ್ಯ ತುಂಬಾ ಕ್ಷಣಿಕವಾದುದು ಈ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು ಸಾಯುವುದೇ ಸಾಧನೆ ಅಲ್ಲ ಸಾಯುವವರೆಗೆ ಸಾಹಸ ಮಾಡಬೇಕು ಸಾವಿಗೆ ಗೌರವ ತರುವಂತಹ ಸತ್ಕಾರ್ಯಗಳನ್ನು ಮಾಡಬೇಕು .ವ್ಯಕ್ತಿ ಸಾಯಬಹುದು ಆದರೆ ಆತ ಮಾಡುವ ಕಾರ್ಯಗಳು ಎಂದೂ ಸಾಯುವುದಿಲ್ಲ ಉತ್ತಮ ಸಾಧನೆ ಮಾಡಬೇಕು ಸಂಸಾರಿಯೂ ಕೂಡ ಸತ್ಕಾರ್ಯಗಳನ್ನು ಮಾಡಲು ಬರುತ್ತದೆ ನವದಂಪತಿಗಳಾದ ನೀವು ಸಹಕಾರ ಸತ್ಕಾರ್ಯ ಮೊದಲು ನಿಮ್ಮ ಬದುಕನ್ನು ಬಳಸಿಕೊಳ್ಳಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *