ಆ ಅಯೋಗ್ಯನ ಜೊತೆ ನಾನು ಸೇರಲ್ಲ : ಶಾಸಕ ಯತ್ನಾಳ್ ಹೀಗೆ ಅಂದಿದ್ಯಾರಿಗೆ..?

suddionenews
1 Min Read

 

ಬೆಳಗಾವಿ: ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನ ಅಲಂಕರಿಸಿ ನೂರು ದಿನಗಳ ಮೇಲಷ್ಟೇಯಾಗಿದೆ. ಆದ್ರೆ ಈ ಮಧ್ಯೆ ಹೊಸ ಗುಸುಗುಸು ಶುರುವಾಗಿದ್ದು, ಸಿಎಂ ಮತ್ತೆ ಬದಲಾಗ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಿಎಂ ಬದಲಾದರೆ ಮುಂದಿ‌ನ ಸಿಎಂ ಹುದ್ದೆಗಾಗಿ ಸಿಕ್ಕಾಪಟ್ಟೆ ಜನ ಕ್ಯೂ ನಿಂತಿದ್ದಾರೆ. ಈ ಬಗ್ಗೆ ಶಾಸಕ ಯತ್ನಾಳ್ ಮಾತನಾಡಿದ್ದು, ಗರಂ ಆಗಿದ್ದಾರೆ.

ಈ ಬಾರಿ ಸಿಎಂ ಆಗುತ್ತೇನೆಂದು ಯಾರ್ಯಾರೋ ಆಸೆಯಲ್ಲಿದ್ದಾರೆ. ಸೂಟು ಹೊಲಿಸಿಕೊಂಡು ಕುಳಿತಿರುವವರು ಇದ್ದಾರೆ. ದೊಡ್ಡ ದೊಡ್ಡವರಿಗೆ ಹಣ ಕೊಡುತ್ತಿರುವವರು ಇದ್ದಾರೆ. ನಾನೇ ಮುಂದಿನ ಸಿಎಂ ಅಂತ ಹೇಳಿಕೊಂಡು ತಿರುಗುತ್ತಿರುವವರು ಇದ್ದಾರೆ. ಆದರೆ ಅದು ಸಾಧ್ಯವಿಲ್ಲ. ಸದ್ಯಕ್ಕೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪವಾಗಿಲ್ಲ.

ದೊಡ್ಡ ದೊಡ್ಡ ವಿಚಾರವನ್ನ ಪ್ರಸ್ತಾಪ ಮಾಡುತ್ತಿರುವುದು ನಿಜ. ನನಗೆ ಆಮಿಷ ಒಡ್ಡುತ್ತಾರೆ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂದು. ಇಂತಹವರನ್ನ ಒಪ್ಪಿಕೊಳ್ಳುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಭೋಗದ ವಸ್ತುಗಳನ್ನ ಕೊಡುವವರನ್ನ ಸಿಎಂ ಮಾಡಲ್ಲ. ಅಂತ ಅಯೋಗ್ಯರ ಜೊತೆ ನಾನು ಸೇರಲ್ಲ ಅಂತ ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *