Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆ.ಎನ್.ರಾಜಣ್ಣ ಮನೆಯಲ್ಲಿ ಔತಣಕೂಟ : ಗೃಹ ಸಚಿವ ಪರಮೇಶ್ವರ್ ಏನಂದ್ರು..?

ಸಚಿವ ಪರಮೇಶ್ವರ್
---Advertisement---

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೆ‌ಎನ್ ರಾಜಣ್ಣ ಅವರು ಮತಕಳ್ಳತನದ ಬಗ್ಗೆ ಒಂದೇ ಒಂದು ಮಾತನಾಡಿ, ಅಲ್ಲಿಂದ ಸಚಿವ ಸ್ಥಾನವನ್ನೇ ಕಳೆದುಕೊಂಡರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು, ಸಚಿವ ಸ್ಥಾನದಿಂದ ಉಳಿಸಿಕೊಳ್ಳುವುದಕ್ಕೆ ಆಗಿಲ್ಲ. ಇದೀಗ ರಾಜಣ್ಣ ಡಿನ್ನರ್ ಅರೆಂಜ್ ಮಾಡಿದ್ದಾರೆ. ರಾಜಕಾರಣದಲ್ಲಿ ಡಿನ್ನರ್ ಮೀಟಿಂಗ್ ಅಂದ್ರೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿರುತ್ತದೆ. ಡಿನ್ನರ್ ಮೀಟಿಂಗ್ ನೆಪದಲ್ಲಿ ಏನೆಲ್ಲಾ ಚರ್ಚೆಗಳಾಗಬಹುದು ಎಂಬ ಕುತೂಹಲವು ಇರುತ್ತದೆ. ಇದೀಗ ರಾಜಣ್ಣ ಅವರ ಔತಣಕೂಟದ ಬಗ್ಗೆ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಪದೇ ಪದೇ ಹೇಳ್ತೀನಿ ಔತಣಕೂಟ ಅಲ್ಲ. ಅವರು ಮನೆಗೆ ಊಟಕ್ಕೆ ಕರೆದಿದ್ದಾರೆ. ನೀವೂ ಸ್ವಲ್ಪ ಹಿಂದೆ ತೆಗೆದು ನೋಡಿ ತುಮಕೂರಿಗೆ ಬಂದಾಗ, ಇದು ಐದನೇ ಸಲವೇನೋ ತುಮಕೂರಿಗೆ ಬರ್ತಾ ಇರೋದು. ನನಗೆ ಗೊತ್ತಿರುವಂತೆ ಮೂರು ಬಾರಿ ರಾಜಣ್ಣ ಅವರ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಅವರು ಆಹ್ವಾನ ಮಾಡ್ತಾರೆ, ಮುಖ್ಯಮಂತ್ರಿಗಳು ಒಪ್ಪಿಕೊಂಡರೆ ಎಲ್ಲಾ ಜಿಲ್ಲೆಯ ನಾಯಕರು ಹೋಗ್ತೇವೆ.

ಈ ಬಾರಿಯೂ ಕೂಡ ಮುಖ್ಯಮಂತ್ರಿಗಳು ರಾಜಣ್ಣ ಅವರು ಊಟಕ್ಕೆ ಕರೆದಿದ್ದಾರೆ ಹೋಗೋಣ್ವಾ ಅಂತ ಕೇಳಿದ್ರು. ನನ್ನನ್ನು ಸಹ ಕೇಳಿದ್ರು. ಸರಿ ಹೋಗೋಣಾ ಅಂದೆ. ಅದರಲ್ಲೇನು ರಾಜಕೀಯ ಚರ್ಚೆ ಆಗುವುದಿಲ್ಲ. ಊಟ ಮಾಡೋದು ಬರೋದು ಅಷ್ಟೇ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ, ಸಚಿವ ಸಂಪುಟ ಪುನರ್ ರಚನೆ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಔತಣಕೂಟವೂ ಕುತೂಹಲ ಹುಟ್ಟು ಹಾಕಿದ್ದು, ಏನೆಲ್ಲಾ ಚರ್ಚೆಗಳು ಆಗಬಹುದು ಎಂಬ ಪ್ರಶ್ನೆಗಳು ಜನರಲ್ಲಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...