ಅಣ್ಣ-ತಮ್ಮಂದಿರ ಮಂಚದ ವಿಚಾರಕ್ಕೆ ಮಧ್ಯಪ್ರವೇಶಿಸಿದ್ದೇ ತಪ್ಪಾಯ್ತಾ..? ಆತ ಕೊಲೆಯಾಗಿ ಹೋದ..!

1 Min Read

ಬೆಂಗಳೂರು: ಕೆಲವೊಮ್ಮೆ ಸಂಬಂಧವೇ ಇಲ್ಲದ ವಿಚಾರಕ್ಕೆ ತಲೆ ಹಾಕಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಅದೆಷ್ಟೋ ಜನ. ಅದೇ ತರ ಉಗುರಿನಲ್ಲಿ ಹೋಗುವ ವಿಚಾರಕ್ಕೂ ಕೊಡಲಿ ತೆಗೆದುಕೊಂಡು ಕೊಲೆಗಳೇ ನಡೆದು ಹೋಗಿವೆ. ಇದೀಗ ಬೆಂಗಳೂರಿನಲ್ಲೂ ಅಂಥದ್ದೇ ಘಟನೆಯೊಂದು ನಡೆದು ಹೋಗಿದೆ.

ಮನೆಯಲ್ಲಿ ಇದ್ದದ್ದು ಒಂದೇ ಮಂಚ. ಅದರ ಮೇಲೆ ನೀನ್ ಮಲಗಬೇಕಾ, ನಾನ್ ಮಲಗಬೇಕಾ ಎಂಬ ಜಗಳ ಶುರುವಾಗಿದೆ. ಈ ಜಗಳದಲ್ಲಿ ಕೊಲೆಯಾಗಿದ್ದು ಮಾತ್ರ ಪಕ್ಕದ ಮನೆಯ ಸಂಬಂಧಿಕ. ಅಣ್ಣ ತಮ್ಮಂದಿರ ಜಗಳಕ್ಕೆ 21 ವರ್ಷದ ವೆಂಕಟೇಶ್ ಕೊಲೆಯಾದ ದುರ್ದೈವಿ. ಮೋಹನ್ ಮತ್ತು ವಿನಯ್ ಕೊಲೆ ಮಾಡಿದ ಯುವಕರು. ಈ ಘಟನೆ ಜೀವನ್ ಭೀಮಾನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಈ ಅಣ್ಣ ತಮ್ಮಂದಿರ ನಡುವೆ ಜಗಳ ಏರ್ಪಟ್ಟಿದೆ. ಮೊದಲೇ ಕುಡಿದಿದ್ದರು. ಪಕ್ಕದ ಮನೆಯಲ್ಲೇ ಇದ್ದ ವೆಂಕಟೇಶ್ ಇವರಿಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಮದ್ಯದ ಬಾಟಲಿ ತೆಗೆದುಕೊಂಡು ತಲೆಗೆ ಹೊಡೆದು, ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *