ಸಾವನ್ನ ಕರೆ ತಂದಿದೆ ಪತ್ನಿಯ ಚಿನ್ನಾಭರಣದ ಆಸೆ..!

suddionenews
1 Min Read

ಬೆಂಗಳೂರು: ಪತಿ ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ ಆಗಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ದಯಾನಂದ‌ ನಗರದಲ್ಲಿ ನಡೆದಿದೆ.

ಒಡವೆ ಆಸೆಯಿಂದ ಹೆಂಡತಿ ಡೂಪ್ಲಿಕೇಟ್ ಚಿನ್ನವನ್ನ ಖರೀದಿಸಿದ್ದಾಳೆ. ಬಾಡಿಗೆ ನೀಡಲು ಎತ್ತಿಟ್ಟ ಹಣ ಖರ್ಚು ಮಾಡಿದ್ದಾಳೆಂದು ಕೋಪಗೊಂಡ ಫಾರೂಕ್ ನಿಂದ ಪತ್ನಿ ನಾಜೀಯಾಳ ಮೇಲೆ ಹಲ್ಲೆ ಮಾಡಿ ಕೊಂದಿದ್ದಾನೆ.

ಇದೇ ತಿಂಗಳ ೨ ರಂದು ಈ ಘಟನೆ ನಡೆದಿದೆ. ೬,೫೦೦ ರೂ ಹಣದಲ್ಲಿ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿ ಮಾಡಿದ್ದಳು. ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ತಿಳಿಸಿದಾಗ ವಿಚಾರ ಬಯಲಾಗಿದೆ. ಕೋಪದಲ್ಲಿ ಮಾತಿಗೆ ಮಾತು ಬೆಳೆದು ಪತಿಯಿಂದ ಪತ್ನಿ ಮೇಲೆ ಹಲ್ಲೆ ನಡೆದಿದೆ. ಆಕೆ ಪ್ರಜ್ಞಾಹೀನಳಾದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಿಕಿತ್ಸೆ ಫಲಿಸದೇ ನಾಜಿಯಾ ಸಾವನ್ನಪ್ಪಿದ್ದಾಳೆ.

ಸದ್ಯ ಮೃತಳ ಪೊಷಕರು ಫಾರೂಕ್ ಮೇಲೆ ದೂರು ನೀಡಿದ್ದಾರೆ. ಪೋಷಕರ ದೂರು ಮೇರೆಗೆ ಫಾರೂಕ್ ಬಂಧಿಸಿದ್ದಾರೆ. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *