ಬಿ.ಎ.ಎಂ.ಎಸ್ ಪದವಿ : ಹಿರಿಯೂರಿನ ಡಾ.ಸ್ನೇಹಗೆ ಬಂಗಾರ ಪದಕ

0 Min Read

ಚಿತ್ರದುರ್ಗ. ಫೆ.26: ಬೆಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ 2022ರ ಅಂತಿಮ ಬಿ.ಎ.ಎಂ.ಎಸ್ ನಲ್ಲಿ ಪಂಚಕರ್ಮ ವಿಷಯದಲ್ಲಿ  ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಹಿರಿಯೂರಿನ ಡಾ.ಸ್ನೇಹಾ ಬಂಗಾರ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 26 ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ. ಥಾವರ್‌ಚಂದ್ ಗೆಹೋಟ್ ಡಾ.ಸ್ನೇಹ ಇವರಿಗೆ ಬಂಗಾರದ ಪದಕ ನೀಡಿ ಗೌರವಿಸಲಿದ್ದಾರೆ.

ಡಾ. ಸ್ನೇಹ  ಹಿರಿಯೂರಿನ ಮಾರುತಿ ನಗರದ ನಿವಾಸಿ ಗಣಿತ ಶಿಕ್ಷಕ ಕೆಂಚಲಿಂಗಪ್ಪ ಮತ್ತು ಲಕ್ಷ್ಮೀ ಇವರ ಪುತ್ರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks