ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ವಾಹನ ನಿರೀಕ್ಷಕ ಪ್ರಕಾಶ ಮಾಧವ ಶಾನಬಾಗ ಅವರು ಬೆಂಗಳೂರಿನ ಆಲ್ ಇಂಡಿಯಾ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್, ಟೆಕ್ನಿಕಲ್ ಎಕ್ಸಿಕ್ಯೂಟಿವ್ ಆಫೀಸರ್ ಅಸೋಷಿಯೇನ್ನ ನ್ಯಾಷನಲ್ ಟ್ರಾನ್ ಪೋರ್ಟ್ ಎನ್ಫೋರ್ಸ್ ಮೆಂಟ್ ಎಕ್ಸಲೆನ್ಸ್ ಅವಾರ್ಡ್ಗೆ ಭಾಜನರಾಗಿದ್ದಾರೆ.
ಬೆಂಗಳೂರಲ್ಲಿ ಶುಕ್ರವಾರ ನಡೆದ ನ್ಯಾಷನಲ್ ಟ್ರಾನ್ಸ್ ಪೋರ್ಟ್ ಎನ್ಪೋರ್ಸ್ಮೆಂಟ್ ಎಕ್ಸಲೆನ್ಸ್ ಆವಾರ್ಡ್ಸ್, ನ್ಯಾಷನಲ್ ರೋಡ್ಸೇಫ್ಟಿ ಎಕ್ಸಲೆನ್ಸ್ ಆವಾರ್ಡ್ಸ್ ಪ್ರಧಾನ ಹಾಗೂ ಟ್ರಾನ್ ಪೋರ್ಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಶಾನಬಾಗ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಶಾನಬಾಗ ಅವರು ಚಿತ್ರದುರ್ಗ ಆರ್ಟಿಒ ವ್ಯಾಪ್ತಿಯಲ್ಲಿ 2023 ಆಗಸ್ಟ್ 8 ರಿಂದ 2026 ಮಾರ್ಚ್ 16ರವರೆಗೆ 1.68 ಕೋಟಿ ರೂ. ತೆರಿಗೆ ವಸೂಲಿಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಶಾನಬಾಗ ಅವರ ಈ ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ಅಸೋಷಿಯೇಷನ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದೆ ಎಂದು ಆರ್ಟಿಒ ಭರತ್ ಎಂ. ಕಾಳಿಸಿಂಗೆ ತಿಳಿಸಿದ್ದಾರೆ.












