ಸಚಿವ ಶಿವರಾಜ್ ತಂಗಡಗಿ ಆಪ್ತನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನ : ಕೊಪ್ಪಳದ ಯುವಕನ ಸ್ಥಿತಿ ಈಗ ಹೇಗಿದೆ..?

suddionenews
1 Min Read

 

 

ಕೊಪ್ಪಳ: ಸಚಿವ ಶಿವರಾಜ್ ತಂಗಡಗಿ ಆಪ್ತನ ಮೇಲೆ ಕಿರುಕುಳದ ಆರೋಪ ಕೇಳಿ ಬಂದಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಮರೇಶ್ ಗೋನಾಳ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಸಿದ್ದು ಮಾಲಿ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಈ ಸಂಬಂಧ ಮಾತನಾಡಿದ್ದು, ನಾನು ಗಾಡಿಗೆ ಹೋಗುತ್ತಿದ್ದೆ. ಗಾಡಿಯಿಂದ ಬಂದ ಮೇಲೆ ಮಾಲೀಕರಿಗೆ ಹಣ ಕೊಡುವುದು ಬಾಕಿ ಇತ್ತು. ಹಣ ಕೊಡುವುದಕ್ಕೆಂದು ಹೋದಾಗ, ಅಲ್ಲೆ ಇದ್ದ ಅಮರೇಶ್ ಗೋನಾಳ ನನ್ನನ್ನು ಕರೆದು ಬೈದರು. ಪೊಲೀಸರಿಂದ ಟಾರ್ಚರ್ ಕೊಡಿಸಿದರು. ಆ ಟಾರ್ಚರ್ ತಡೆಯುವುದಕ್ಕೆ ಆಗದೆ ಆತ್ಮಹತ್ಯೆಗೆ ಯತ್ನಿಸಿದೆ ಎಂದಿದ್ದಾರೆ.

ಇನ್ನು ಅಮರೇಶ್ ಗೋನಾಳರನ್ನು ಸಚಿವ ಶಿವರಾಜ್ ತಂಗಡಗಿ ಆಪ್ತ ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ವಿಷ ತೆಗೆದುಕೊಂಡ ತಕ್ಷಣ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಹೀಗಾಗಿ ಪೊಲೀಸರು ತಕ್ಷಣ ಆ ಯುವಕನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *