ಭಜರಂಗದಳ ಕಾರ್ಯಕರ್ತನ ಹಲ್ಲೆಗೆ ಯತ್ನ : ಸಾಗರದಲ್ಲಿ ಮೂವರ ಬಂಧನ

suddionenews
1 Min Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಬಳಿ ಭಜರಂಗ ಕಾರ್ಯಕರ್ತನ ಸುನಿಲ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಬಂಧನವಾಗಿದೆ. ಸಾಗರ ಪಟ್ಟಣದ ನಿವಾಸಿಗಳಾದ ಸಮೀರ್, ಇಮಾನ್ ಹಾಗೂ ಮನ್ಸೂರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ 24 ಗಂಟೆಯಲ್ಲಿಯೇ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ತಂಡಗಳನ್ನು ರಚಿಸಿಕೊಂಡು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುನೀಲ್ ಮೇಲೆ ನಡೆದ ಹಲ್ಲೆ ಯತ್ನ ಖಂಡಿಸಿ, ಪೊಲೀಸ್ ಠಾಣಾ ಎದುರು ನೂರಾರು ಜನ ಪ್ರತಿಭಟನೆ ನಡೆಸಿದ್ದರು. ಅಷ್ಟೆ ಅಲ್ಲ ಇವತ್ತು ಒಂದು ದಿನದ ಮಟ್ಟಿಗೆ ಸಾಗರವನ್ನು ಬಂದ್ ಮಾಡಲಾಗಿತ್ತು. ಸುನಿಲ್ ಜಿಯೋ ಫೈಬರ್ ಕಚೇರಿಯ ಬಳಿ ಬಂದಾಗ ಸಮೀರ್ ಎಂಬಾತ ಮಚ್ಚು ತೆಗೆದು, ಹಲ್ಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *