ಕ್ಷುಲ್ಲಕ ಕಾರಣಕ್ಕಾಗಿ ಜಗಳ ಓರ್ವನ ಹತ್ಯೆ ; ಇಬ್ಬರ ಬಂಧನ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ನ.17) : ತಾಲ್ಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯವಾಗಿದೆ.

ಜಾಲಿಕಟ್ಟೆ ಗ್ರಾಮದ ಮಹಂತೇಶ್ ಮತ್ತು ಸ್ವಾಮಿ ಎಂಬ ಅಕ್ಕಪಕ್ಕದ ಮನೆಯವರ ನಡುವೆ ನಾಯಿ ವಿಚಾರಕ್ಕೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಸ್ವಾಮಿ ಎಂಬ ವ್ಯಕ್ತಿ ಎರಡು ನಾಯಿಗಳನ್ನು ಸಾಕಿರುತ್ತಾರೆ. ರಾತ್ರಿ ವೇಳೆಯಲ್ಲಿ ನಾಯಿಗಳು ಮಹಂತೇಶ್ ಅವರ ಮನೆಯ ಸಮೀಪ ಗಲೀಜು ಮಾಡಿವೆ ಎಂಬ ವಿಚಾರಕ್ಕೆ ಜಗಳ ಶುರುವಾಗಿದೆ. ಜಗಳ ತೀವ್ರ ಸ್ವರೂಪಕ್ಕೆ ತಿರುಗಿ ಸ್ವಾಮಿ ಮತ್ತು ಆತನ ಹೆಂಡತಿ ಮರದ ಕಟ್ಟಿಗೆಯಿಂದ ಮಹಂತೇಶ್ ಗೆ ಹೊಡದ ಪರಿಣಾಮವಾಗಿ ಆತ ನೆಲಕ್ಕುರುಳುತ್ತಾನೆ. ತಕ್ಷಣವೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮಹಂತೇಶ್ ನಿಧನ ಹೊಂದಿದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ವಾಮಿ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *