Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡದ ಉಳಿವಿಗಾಗಿ ದೊಡ್ಡ ಚಳವಳಿ ಅನಿವಾರ್ಯ-ಅರುಣ್ ಕುಮಾರ್

Facebook
Twitter
Telegram
WhatsApp

ಬೆಂಗಳೂರು: ಕನ್ನಡದ ಉಳಿವಿಗಾಗಿ ದೊಡ್ಡ ಚಳವಳಿಯೇ ಆಗಬೇಕಿದೆ. ಕನ್ನಡದ ಬರವಣಿಗೆ, ಮಾತು, ಮೊಬೈಲ್ ಸಂದೇಶದ ಮೂಲಕ ನಾವೆಲ್ಲರೂ ಆ ಚಳವಳಿಯ ಭಾಗವಾಗಬೇಕು ಎಂದು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಹೇಳಿದರು.

ಬಿಜೆಪಿ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆಯ ನಂತರ ಮಾತನಾಡಿದ ಅವರು, ಕನ್ನಡದ ಶಬ್ದಗಳು ನಾಲಿಗೆ ಮೇಲೆ ಕುಣಿದಾಡಬೇಕು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಕನ್ನಡ ಶಬ್ದಗಳಿಲ್ಲ. ಕೇವಲ ಶಾಸ್ತ್ರಕ್ಕಾಗಿ ಕನ್ನಡ ರಾಜ್ಯೋತ್ಸವ ಆಚರಿಸಬಾರದು. ಕನ್ನಡಾಂಬೆ, ಭಾರತಾಂಬೆ ಕೇವಲ ಒಂದು ಭಾವಚಿತ್ರಕ್ಕೆ ಸೀಮಿತವಲ್ಲ. ಅದು ಜೀವಂತ ಅಸ್ತಿತ್ವ ಆಗಬೇಕು ಎಂದರು.

ಹೆಚ್ಚಿನ ಕನ್ನಡ ಶಬ್ದಗಳ ಬಳಕೆ, ಕನ್ನಡದಲ್ಲಿ ಸಹಿ ಮಾಡುವುದು, ಮಕ್ಕಳಿಗೆ ಕನ್ನಡದ ಅಂಕಿ, ಅಕ್ಷರ, ಶಬ್ದಗಳನ್ನು ಕಲಿಸುವುದು, ಬಣ್ಣ, ಸಂಬಂಧಗಳನ್ನು ಎಳೆಯರಿಗೆ ತಿಳಿಸುವುದು ಅನಿವಾರ್ಯ. ಭಾಷೆ ಮರೆಯಾದರೆ ಅದನ್ನು ಮತ್ತೆ ತರುವುದು ಕಷ್ಟ. ಕಳಕೊಳ್ಳುವುದು ಸುಲಭ. ಇಂಗ್ಲಿಷ್ ನಮ್ಮನ್ನು ಮುಗಿಸುತ್ತಿದೆ ಎಂದರು.
ಕನ್ನಡವನ್ನು ಪ್ರೀತಿಸಿ ಬೆಳೆಸಬೇಕು. ಕನ್ನಡ ಪರಂಪರೆ, ಗ್ರಾಮೀಣ ರೀತಿನೀತಿಯನ್ನು ಉಳಿಸಬೇಕು. ನಮ್ಮ ಗಾಳಿ, ನೆಲ, ಸಾಹಿತ್ಯ, ಪರಂಪರೆಯನ್ನು ಬೆಳೆಸುವ ರೀತಿಯಲ್ಲಿ ನಾವು ಸಾಗಬೇಕು ಎಂದು ಆಶಿಸಿದರು. ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಬೇರೆ ಬೇರೆ ಡಿಎನ್ಎೆ ಇಲ್ಲ ಎಂದರು. ಸ್ವದೇಶಿ ವಸ್ತುಗಳ ಬಳಕೆ ನಮ್ಮದಾಗಲಿ. ಚೀನಾದ ವಸ್ತುಗಳನ್ನು ದೂರ ಇಡೋಣ ಎಂದು ಅವರು ತಿಳಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!