ಭೀಕರ ರಸ್ತೆ ಅಪಘಾತದಲ್ಲಿ ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ನಿಧನ..!

suddionenews
0 Min Read

ಚಿತ್ರದುರ್ಗ: ಭೀಕರ ಅಪಘಾತದಲ್ಲಿ ಅಂತರಾಷ್ಟ್ರೀಯ ತೊಗಲು ಗೊಂಬೆ ಕಲಾವಿದ ಬೆಳಗಲು ವೀರಣ್ಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಚಳ್ಳಕೆರೆ ಬಳಿ ಈ ದುರ್ಘಟನೆ ನಡೆದಿದೆ. ಬೆಳಗಲು ವೀರಣ್ಣ ಅವರಿದ್ದ ಕಾರು ಪಲ್ಟಿಯಾಗಿ, ಸಾವನ್ನಪ್ಪಿದ್ದಾರೆ. ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ವೀರಣ್ಣ ಅವರು ಪ್ರಯಾಣ ಬೆಳೆಸಿದ್ದರು. ಆದ್ರೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ವೀರಣ್ಣ ಮತ್ತು ಅವರ ಮಗ ಕಾರಿನಲ್ಲಿ ಇದ್ದರು. ಕಾರು ಓಡಿಸುತ್ತಿದ್ದ ಅವರ ಮಗ ಹನುಮಂತ ಅವರಿಗೆ ಗಂಭೀರ ಗಾಯವಾಗಿದೆ. ವೀರಣ್ಣ ಅವರ ನಿಧನದಿಂದಾಗಿ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಮೆರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತೊಗಲು ಗೊಂಬೆ ಪ್ರದರ್ಶನ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *