ದನಗಳನ್ನು ಕದ್ದೊಯ್ದಿದ್ದ ಖದೀಮರ ಬಂಧನ..!

suddionenews
1 Min Read

ಮಂಗಳೂರು: ದನಗಳನ್ನು ಕದಿಯುತ್ತಿದ್ದ ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ. ಮನೆಯೊಂದರ ಕೊಟ್ಟಿಗೆಗೆ ನುಗ್ಗಿ ದನ ಕಳುವು ಮಾಡಿದ್ದ ಮಹಮ್ಮದ್ ಸಲೀಂ, ಮಹಮ್ಮದ್ ತಂಜೀಂ, ಮಹಮ್ಮದ್ ಇಕ್ಬಾಲ್ ಎಂಬ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಹೊರವಲಯದಲ್ಲಿರುವ ಬಂಗ್ರಕಳೂರು ಎಂಬಲ್ಲಿ ದನಗಳನ್ನು ಸಾಕಿದ್ದ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿಗಳು, ಮನೆಯವರಿಗೆ ಮಾರಾಕಾಸ್ತ್ರಗಳನ್ನ ತೋರಿಸಿ ಹೆದರಿಸಿದ್ದರು. ಆ ಬಳಿಕ ಮೂರು ದನಗಳನ್ನು ಎಳೆದುಕೊಂಡು ಹೋಗಿದ್ದರು. ಈ ದನಗಳು ಉಮೇಶ್ ಮಲರಾಯಸಾನ ಹಾಗೂ ಉದಯ್ ಶೆಟ್ಟಿ ಎಂಬುವವರಿಗೆ ಸೇರಿದ್ದವಾಗಿದ್ದವು.

ಈ ಸಂಬಂಧ ಉದಯ್ ಹಾಗೂ ಉಮೇಶ್ ದೂರು ದಾಖಲಿಸಿದ್ದರು. ದೂರು ದಾಖಲಾದ 24 ಗಂಟೆಗಳಲ್ಲಿ ಕಳ್ಳರನ್ನ ಕಾವೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ದನಗಳನ್ನ ಕೊಂದು ತಿಂದಿದ್ದಾರೆಂಬ ಆರೋಪ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *