ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ನಡೀತಾ ಇದ್ದ ಮನಸ್ತಾಪ ಈಗ ಬೀದಿ ರಂಪವಾಗಿದೆ. ಅದಕ್ಕೆ ಉದಾಹರಣೆ ಅಂದ್ರೆ ಸರಣಿ ರಾಜೀನಾಮೆ ಶುರುವಾಗಿದೆ. ಉಪಚುನಾವಣೆ ಮುಗಿದ ಮೇಲೆ ಅಲ್ಪಸಂಖ್ಯಾತರು ಅಸಮಾಧಾನ ವ್ಯಕ್ತಪಡಿಸಿದ್ದರು. ಮುಸ್ಲಿಂ ಮುಖಂಡರ ಮೇಲೆನೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ಈ ವಿಚಾರವನ್ನ ತಂದಿದ್ದರು.
ಇದೀಗ ಕಾಂಗ್ರೆಸ್ ಹೈಕಮಾಂಡ್ ಕೂಡ ಅಲ್ಪಸಂಖ್ಯಾತರ ನಡೆಗೆ ಬೇಸರ ವ್ಯಕ್ತಪಡಿಸಿದೆ. ಸಾಕಷ್ಟು ಉನ್ನತ ಹುದ್ದೆಗಳನ್ನ ನೀಡಿ, ಪಕ್ಷದಲ್ಲಿ ನಿಮ್ಮನ್ಮ ಬೆಳೆಸಿದ್ದೀವಿ. ಬೈ ಎಲೆಕ್ಷನ್ ನಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದು, ಯಾತಕ್ಕಾಗಿ ಎಂಬ ಪ್ರಶ್ನೆಯನ್ನು ಕೇಳಿದೆ. ಇದರ ಹಿಂದೆನೆ ರಾಜೀನಾಮೆ ಪರ್ವ ಶುರುವಾಗಿದೆ. ಅದು ಅಬ್ದುಲ್ ಜಬ್ಬಾರ್ ಅವರಿಂದ. ರಾಜೀನಾಮೆ ಪರ್ವ ಮುಂದುವರೆಯುತ್ತೆ ಎನ್ನಲಾಗಿದೆ.

ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಒಂದಷ್ಟು ಸಂದೇಶವನ್ನು ನೀಡಿದೆ. ಪ್ರಮುಖವಾಗಿ ಕಾಂಗ್ರೆಸ್ ನಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಅವಕಾಶ, ಅಧಿಕಾರ ನೀಡಿದ ಪಕ್ಷದ ವಿರುದ್ಧ ಕೆಲಸ ಮಾಡಿದರೆ ಸಹಿಸಲ್ಲ. ಅಧಿಕಾರ ಅನುಭವಿಸಿ ಎಲೆಕ್ಷನ್ ವೇಳೆ ಪಕ್ಷ ವಿರೋಧಿ ಕೆಲಸದ ಅವಶ್ಯಕತೆ ಇತ್ತಾ..? ಪಕ್ಷ ವಿರೋಧಿ ಕೆಲಸ ಮಾಡುವವರನ್ನು ಕಟ್ಟಿ ಹಾಕಿಲ್ಲ ಅಂದ್ರೆ ಮುಂದೆ ಕಷ್ಟ. ವಿರೋಧಿ ಕೆಲಸ ಮಾಡುವವರನ್ನು ಕಟ್ಟಿ ಹಾಕಿಲ್ಲ ಎಂದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ನಾಳೆ ಸಮುದಾಯದ ವೋಟ್ ಪ್ರಸ್ತಾಪ ಮಾಡಿ ಟಿಕೆಟ್ ಬೇಡಿಕೆ ಇಡುವ ಸಾಧ್ಯತೆ. ನಾಳೆ ಅಲ್ಪಸಂಖ್ಯಾತ ಸಮುದಾಯದಿಂದ ಬಹಿರಂಗ ಥ್ರೆಟ್ ಬರಬಹುದು. ಕಾಂಗ್ರೆಸ್ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಮಾತನ್ನ ತಿಳಿಸಿದ್ದಾರೆ.












