ವಿಧ್ಯಾಭ್ಯಾಸ ಮುಂದುವರೆಸಲು ಅಮೆರಿಕಾಗೆ ಹೊರಟ ಅಪ್ಪು ಮೊದಲ ಪುತ್ರಿ..!

1 Min Read

ಬೆಂಗಳೂರು: ಅಕ್ಟೋಬರ್ 29 ಈ ದಿನಾಂಕ ಕನ್ನಡಿಗರ ಪಾಲಿನ ಕರಾಳ ದಿನ. ಯಾರು ಯಾವತ್ತಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಕನ್ನಡಿಗರ ರಾಜಕುಮಾರನನ್ನ ಕಳೆದುಕೊಂಡ ದಿನವದು. ಅಂದು ಇಡೀ ಕರುನಾಡು ಸೂತಕದ ಮನೆಯಂತಿತ್ತು. ಎಲ್ಲೋ ದೂರದ ದೇಶದಲ್ಲಿದ್ದ ಮಗಳಿಗೆ ಅಪ್ಪನ ಸಾವಿನ ಸುದ್ದಿ ಗರ ಬಡಿದಂತೆ ಮಾಡಿತ್ತು.

ಅಪ್ಪನ ಆಸೆಯಂತೆ ಓದಲು ಅಮೆರಿಕಾಗೆ ಹೋಗಿದ್ದ ಅಪ್ಪು ಮೊದಲ ಪುತ್ರಿ ದೃತಿ, ಅಪ್ಪ ಸಾವಿನ ಸುದ್ದಿ ಕೇಳಿ ಅಂದು ಅಮೆರಿಕಾದಿಂದ ಒಬ್ಬರೇ ಬೆಂಗಳೂರಿನವರೆಗೆ ಪಯಣ ಬೆಳೆಸಿ ಬಂದಿದ್ದರು. ಆ ನೋವು, ದುಃಖದ ಕಟ್ಟೆ ಹೊಡೆದಿದ್ದು ಅಪ್ಪು ಮಲಗಿದ್ದನ್ನ ನೋಡಿದಾಗ. ಮಗಲಕ ಬರುವಿಕೆಗಾಗಿ ಕಾದಿದ್ದ ಕುಟುಂಬ ಅಪ್ಪು ನಿಧನರಾದ ಮೂರನೇ ದಿನಕ್ಕೆ ಅಂತ್ಯಸಂಸ್ಕಾರವನ್ನು ಮಾಡಿ‌ ಮುಗಿಸಿದ್ರು.

ಅಪ್ಪನ ಹನ್ನೊಂದನೇ ಪುಣ್ಯ ಕಾರ್ಯದ ಸಲುವಾಗಿ ದೃತಿ ಬೆಂಗಳೂರಲ್ಲೇ ಉಳಿದುಕೊಂಡಿದ್ದರು. ಪುಣ್ಯ ಕಾರ್ಯ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಎಲ್ಲಾ ಕಾರ್ಯ ಮುಗಿದಿದೆ. ಅಪ್ಪನಿಲ್ಲದ ದುಃಖದ ಭಾರವನ್ನ ಮನಸ್ಸಿನಲ್ಲೇ ಹೊತ್ತಿಕೊಂಡು, ಅಮ್ಮನಿಗೆ ಸಮಾಧಾನ ಮಾಡಿ ಧೃತಿ ಅಪ್ಪನ ಆಸೆಯಂತೆ ಮತ್ತೆ ಅಮೆರಿಕಾಗೆ ಹೊರಟಿದ್ದಾರೆ.

ಇಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಗಳಿಗೆ ಧೈರ್ಯ ತುಂಬಿ ಏರ್ಪೋರ್ಟ್ ಗೆ ಬಿಟ್ಟು ಬಂದಿದ್ದಾರೆ. ಬರುವಾಗ ಅಪ್ಪ ಇಲ್ಲ ಅನ್ನೋ ನೋವು.. ಈಗ ಹೋಗುವಾಗಲೂ ಅಪ್ಪ ಇನ್ನಿಲ್ಲ ಅನ್ನೋ ನೋವು ದೃತಿಯನ್ನ ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *