ರಾಯಚೂರಿನಲ್ಲಿ ಕಲುಷಿತ ನೀರು ಕುಡಿದ ಪ್ರಕರಣಕ್ಕೆ ಮತ್ತೊಬ್ಬ ನಿವಾಸಿ ಸಾವು..!

suddionenews
1 Min Read

ರಾಯಚೂರು: ನಗರದಲ್ಲಿ ಅಶುದ್ಧ ನೀರಿನ ಸೇವನೆಯಿಂದಾಗಿ ಸಾಕಷ್ಟು ಜನ ಅಸ್ವಸ್ಥರಾಗಿದ್ದರು. ವಾಂತಿ ಭೇದಿಯಿಂದಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 25 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆ ಸಂಖ್ಯೆ ಇನ್ನು ಹೆಚ್ಚಳವಾಗುತ್ತಲೆ ಇದೆ. ಅದರ ಜೊತೆಗೆ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ವಾರ್ಡ್‌ ಸಂಖ್ಯೆ 7 ರ ನಿವಾಸಿ ಗಫಾರ್‌ (40) ಮೃತಪಟ್ಟಿದ್ದಾರೆ.

ಅಸ್ವಸ್ಥ ನೀರು ಕುಡಿದಿದ್ದ ಸ್ಥಳೀಯರು, ವಾಂತಿ, ಭೇದಿ ಕಾರಣದಿಂದ ಎರಡೂ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕಲುಷಿತ ನೀರು ಸೇವನೆಯಿಂದ ಮೇ 30 ರಂದು ರಾಯಚೂರಿನ ಇಂದಿರಾನಗರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ನಿವಾಸಿ ಸಾವನ್ನಪ್ಪಿದ್ದಾರೆ.

ಅಶುದ್ಧ ನೀರು ಪ್ರಕರಣ ಸಂಬಂಧ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರ ಕೃಷ್ಣ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *