Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮೇಜಾನ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ : ಚಿಕಿತ್ಸೆ ಫಲಿಸದೆ ಸಾವು..!

Facebook
Twitter
Telegram
WhatsApp

 

ದೆಹಲಿ: ರಾತ್ರಿ ಸಮಯದಲ್ಲಿ ಅಮೇಜಾನ್ ಸಂಸ್ಥೆಯ ಮ್ಯಾನೇಜರ್ ರನ್ನು ಗುಂಡಿಟ್ಟು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಹರ್ಪೀತ್ ಗಿಲ್ ಗುಂಡೇಟಿಗೆ ಬಲಿಯಾದ ಮ್ಯಾನೇಜರ್ ಆಗಿದ್ದಾರೆ. ದೆಹಲಿಯ ಶುಭಾಶ್ ವಿಹಾರ್ ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ.

ಹರ್ಪಿತ್ ಗಿಲ್ ತನ್ನ ಚಿಕ್ಕಪ್ಪನ ಜೊತೆಗೆ ಇದ್ದರು. ಶುಭಾಶ್ ವಿಹಾರ್ ಪ್ರದೇಶದಲ್ಲಿ ಇದ್ದಾಗ ದುಷ್ಕರ್ಮಿಗಳು ಬಂದು ಗುಂಡಿನ ದಾಳು ನಡೆಸಿದ್ದಾರೆ. ಗಿಲ್ ತಲೆಗೆ ಬಲವಾದ ಗುಂಡೇಟು ಬಿದ್ದಿದೆ. ಅವರ ಚಿಕ್ಕಪ್ಪನ ಮೇಲೂ ಗುಂಡಿನ ಸುರಿಮಳೆ ಗೈದಿದ್ದಾರೆ. ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಲೆಗೆ ಗಂಭೀರ ಗುಂಡೇಟು ಬಿದ್ದ ಕಾರಣ ಹರ್ಪಿತ್, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿತ್ತಾದರೂ ಬದುಕುಳಿಯಲಿಲ್ಲ. ಇನ್ನು ಅವರ ಚಿಕ್ಕಪ್ಪನಿಗೂ ದೇಹದ ಮೇಲೆ ಗುಂಡೇಟು ಬಿದ್ದು ಗಂಭೀರ ಗಾಯಗಳಾಗಿವೆ. ಸದ್ಯ ಅವರ ಚಿಕ್ಕಪ್ಪ ಸುಧಾರಿಸಿಕೊಳ್ಳುತ್ತಿದ್ದಾರೆ. ರಾತ್ರಿ ಸುಮಾರು 11.30 ಕ್ಕೆ ಫೈರಿಂಗ್ ನಡೆದಿದೆ. ಯಾರೋ ಐವರು ಬಂದು ಗುಂಡು ಹಾರಿಸಿ, ಪರಾರಿಯಾದರು ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಆರೋಪಿ ಡಿಎನ್ಎ ಟೆಸ್ಟ್ ಗೆ ಮುಂದಾದ ಅಧಿಕಾರಿಗಳು : ಯಾಕೆ ಗೊತ್ತಾ..?

ಹುಬ್ಬಳ್ಳಿ: ನೇಹಾ ಹೀರೇಮಠ ಕೊಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ರಾಜ್ಯ ಸರ್ಕಾರ ಕೂಡ ನೇಹಾ ಕೇಸನ್ನು ಸಿಐಡಿಗೆ ಒಪ್ಪಿಸಿದೆ. ಎಲ್ಲಾ ರೀತಿಯಿಂದಾನೂ ತಪಾಸಣೆ ನಡೆಯುತ್ತಿದೆ. ಇಂದು

ರಾವಣ ಪಾತ್ರಕ್ಕಾಗಿ ಯಶ್ ಹೆಚ್ಚಿಸಿಕೊಂಡಿದ್ದು ಬರೋಬ್ಬರಿ 15 ಕೆಜಿ..!

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಸಿಕ್ಜಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಯಶ್ ಕೂಡ ಅದರಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇನ್ನಷ್ಟು ಸದ್ದು ಮಾಡಿದೆ. ರಾವಣನ ಪಾತ್ರದಲ್ಲಿ ಯಶ್ ರಾಮಾಯಣದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

error: Content is protected !!