ಮನವೊಲಿಸುವ ಪ್ರಯತ್ನವೆಲ್ಲಾ ಮುಗಿದಿದೆ : ಸಚಿವ ಶ್ರೀರಾಮುಲು

suddionenews
1 Min Read

 

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ತಾವೂ ಹಠ ತೊಟ್ಟಂತೆ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇಂದು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಲ್ಲದೆ, ಕೊಪ್ಪಳದಿಂದಾನೆ ಸ್ಪರ್ಧೆ ಮಾಡುವ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಮೊದಲಿಗೆ ಸಚಿವ ಸ್ಥಾನ ಬಂದಾಗ ರಾಮುಲುಗಾಗಿ ಬಿಟ್ಟುಕೊಟ್ಟಿದ್ದರು. ಈಗ ತಮ್ಮ ಆಪ್ತ ಗೆಳೆಯನಿಗಾಗಿ ರಾಮುಲು ಬರುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು.

ಜನಾರ್ದನ ರೆಡ್ಡಿಯವರು ಹೊಸ ಪಕ್ಷ ಸ್ಥಾಪನೆ ಬಗ್ಗೆ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ. ಪ್ರಾಣ ಸ್ನೇಹಿತರಾಗಿದ್ದ ರೆಡ್ಡಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದರು. ಬಿಜೆಪಿ ಕೂಡ ರೆಡ್ಡಿಗೆ ಶಕ್ತಿಯಾಗಿತ್ತು. ಗಾಲಿ ಜನಾರ್ದನ ರೆಡ್ಡಿಯನ್ನು ಬಿಜೆಪಿ ಯಾವತ್ತು ಬಿಟ್ಟು ಕೊಟ್ಟಿರಲಿಲ್ಲ. ರೆಡ್ಡಿ ಕೂಡ ಯಾವತ್ತು ಬಿಜೆಪಿಯನ್ನು ಬಿಟ್ಟು ಕೊಟ್ಟಿರಲಿಲ್ಲ. ಈಗ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ.

ವೈಯಕ್ತಿಕ ವಾಗಿ ಹೊಸ ಪಕ್ಷ ಮಾಡಿದ್ದಾರೆ. ಈ ಮುಂಚೆ ವೈಯಕ್ತಿಕವಾಗಿ ಮನವೊಲಿಸುವ ಪ್ರಯತ್ನ ನಡೆದಿತ್ತು. ಈಗ ಮನವೊಲಿಸುವ ಸಮಯ ಮುಗಿದಿದಿದೆ. ನಾನು ಪಕ್ಷದ ಶಸ್ತಿನ ಸಿಪಾಯಿ ಕಾಲ ಬಂದಾಗ ಉತ್ತರಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *