Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಷಯ ತೃತೀಯ : ಚಿತ್ರದುರ್ಗದ ಶ್ರೀ ಕೇಶವ ಜ್ಯೂವೆಲರ್ಸ್ ನಲ್ಲಿ ಆಭರಣ ಪ್ರಿಯರಿಗೆ ವಿಶೇಷ ಕೊಡುಗೆ ; ಆಭರಣ ಖರೀದಿಸಿ, 1 KG ಚಿನ್ನ ಬಂಪರ್ ಬಹುಮಾನ ಗೆಲ್ಲಿರಿ…!

Facebook
Twitter
Telegram
WhatsApp

ಸುದ್ದಿಒನ್ ಡೆಸ್ಕ್

ಚಿತ್ರದುರ್ಗ, (ಏ.23):  ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಇಂದು (ಏ.23) ಚಿನ್ನಾಭರಣ ಮಳಿಗೆಗಳಲ್ಲಿ ಜನವೋ ಜನ. ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿದಾರರು ಅತ್ಯಂತ ಉತ್ಸಾಹ, ಸಡಗರದಿಂದ ಆಭರಣಗಳನ್ನು ಖರೀದಿಸಲು ಸಾಲುಗಟ್ಟಿದ್ದರು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು.

ಅದರಲ್ಲೂ ವಿಶೇಷವಾಗಿ ನಗರದ ಕೋಟೆ ರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲಿರುವ ಪ್ರತಿಷ್ಠಿತ ಆಭರಣ ಮಳಿಗೆಯಾದ ಶ್ರೀ ಕೇಶವ ಜ್ಯೂವೆಲರ್ಸ್ ನಲ್ಲಿ ಅಕ್ಷಯ ತೃತೀಯದ ವಿಶೇಷ ದಿನವಾದ ಇಂದು ಆಭರಣ ಖರೀದಿಸಲು ‌ಗ್ರಾಹಕರು ಮುಗಿಬಿದ್ದಿದ್ದರು.

ಬೆಳಿಗ್ಗೆ 9 ರಿಂದಲೇ ವ್ಯಾಪಾರ ಆರಂಭವಾಗಿತ್ತು.ಅದರಲ್ಲೂ ಮಹಿಳೆಯರು ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದರು. ಇಲ್ಲಿಗೆ ಸ್ಥಳೀಯರು ಮಾತ್ರವಲ್ಲದೆ ದೂರದ ಊರುಗಳಿಂದಲೂ, ಬೇರೆಬೇರೆ ಜಿಲ್ಲೆಗಳಿಂದಲೂ ಬಂಗಾರ ಕೊಳ್ಳಲು ಬರುವುದು ವಿಶೇಷ.

ತಿಂಗಳ ಮೊದಲೇ ಬುಕ್ಕಿಂಗ್‌ : ಅಕ್ಷಯ ತೃತೀಯದ ದಿನ ಒಂದು ಚಿಕ್ಕ ಒಡವೆಯನ್ನಾದರೂ ಖರೀದಿಸಲೇಬೇಕು. ಅಕ್ಷಯ ತೃತೀಯದಂದು ಆಭರಣ ಕೊಳ್ಳುವು­ದರಿಂದ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಜನರಲ್ಲಿದೆ. ಹೀಗಾಗಿ ತಿಂಗಳ ಮೊದಲೇ ಬುಕ್ಕಿಂಗ್‌ಗೆ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.

ಮೊದಲೇ ಬಂದು ತಮ್ಮ ಮನಕ್ಕೆ ಒಪ್ಪುವ ವಿನ್ಯಾಸದ ಆಭರಣವನ್ನು ಆಯ್ಕೆ ಮಾಡಿ, ಒಂದಿಷ್ಟು ಮುಂಗಡ ಹಣ ನೀಡಿ, ಭಾನುವಾರ ದಂದು ಬಂದು ಖರೀದಿ ಮಾಡಿದರು. ಇನ್ನೂ ಕೆಲವರು ಮಾತ್ರ ಈ ದಿನದಂದೇ ಬಂದು ಆಭರಣ ನೋಡಿ ತಮಗೆ ಮೆಚ್ಚಿದ ಆಭರಣಗಳನ್ನು ಖರೀದಿ ಮಾಡುತ್ತಾರೆ. ಆಭರಣದ ಅಂಗಡಿಗಳಲ್ಲಿ ವಹಿವಾಟು ಅಕ್ಷಯ ತೃತೀಯದಂದು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಇರುತ್ತದೆ.

ವಿಶೇಷ ರಿಯಾಯ್ತಿ : ವಿಶೇಷವಾಗಿ ಈ ಅಕ್ಷಯ ತೃತೀಯ ದಿನದಂದೇ ಗ್ರಾಹಕರನ್ನು ಸೆಳೆಯುವ ಸಲುವಾಗಿ ವಿಶೇಷ ರಿಯಾಯ್ತಿಯನ್ನು ನೀಡಲಾಗಿತ್ತು.

ನಮ್ಮಲ್ಲಿ ಪ್ರತಿ ಮೂರು ಗ್ರಾಂ ಖರೀದಿಗೆ ಒಂದು ಗೋಲ್ಡ್ ಕಾಯಿನ್ ಉಡುಗೊರೆಯನ್ನು ನೀಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಕರ್ನಾಟಕ ಜ್ಯೂವೆಲರಿ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ಪ್ರತಿ ₨.5000 ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದೆ. ಈ ಕೂಪನ್ ನಲ್ಲಿ ವಿಜೇತ ಗ್ರಾಹಕರಿಗೆ 24 ಕ್ಯಾರೆಟ್ ನ ಒಂದು ಕೆಜಿ ಬಂಗಾರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಮೇ 10 ರಂದು ಈ ಕೂಪನ್ ನ ಡ್ರಾ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; 08194-223454, 08194- 220708

ನಮ್ಮಲ್ಲಿ ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರೀತಿಯ ವಿನ್ಯಾಸದ ಆಭರಣಗಳು ದೊರೆಯುತ್ತವೆ. ಜನರು ತಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಚಿನ್ನ ಖರೀದಿಸುತ್ತಾರೆ. ನಮ್ಮಲ್ಲಿ ಮೂಗು ನತ್ತು, ಓಲೆ, ಉಂಗುರ, ಚೈನು, ಬೆಳ್ಳಿಯ ಕಾಲುಂಗುರ,  ಚೈನು, ಬಂಗಾರದ ನಾಣ್ಯ, ನೆಕ್ಲೆಸ್, ವಿಶೇಷ ಬಗೆಯ ನೆಕ್‌ಲೆಸ್, ಯುವ ಜನರಿಗಾಗಿ ಆಧುನಿಕ ಶೈಲಿಯ ವಿಶೇಷ ಆಭರಣಗಳನ್ನು ಖರೀದಿಗೆ ಇಡಲಾಗಿದೆ ಎಂದು ಶ್ರೀ ಕೇಶವ ಜ್ಯುವೆಲರ್ಸ್ ನ ಮಾಲೀಕರಾದ ಕೇಶವಮೂರ್ತಿ ಯವರು ತಿಳಿಸಿದರು.

ಅಕ್ಷಯ ತೃತಿಯ ನಮ್ಮ ಜನರ ಒಂದು ಭಾವನಾತ್ಮಕ ನಂಬಿಕೆಯ ಬಂಗಾರದ ಹಬ್ಬ. ಪ್ರಸ್ತುತ ಚುನಾವಣಾ ಮಾದರಿ ನೀತಿ ಸಂಹಿತೆ
ನಿಬಂಧನೆ ಇದೆ. ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಕೊಂಡೊಯ್ಯುವಂತಿಲ್ಲ ಎಂಬ ಊಹಾಪೋಹಗಳಿಗೆ ಜನರು ಮಹತ್ವ ನೀಡದೆ ಹೆಚ್ಚು ಅದ್ಧೂರಿಯಾಗಿ, ಸಂಭ್ರಮದಿಂದ ಜನ ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಎಂದು ಶ್ರೀ ಕೇಶವ ಜ್ಯುವೆಲರ್ಸ್ ಮಾಲೀಕರಾದ ಕೇಶವಮೂರ್ತಿ ಅವರು ಆಶಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!